ಅಂಜನಾದ್ರಿ ಅಭಿವೃದ್ಧಿಗೆ ೫ ಸಾವಿರ ಕೋಟಿ: ರೆಡ್ಡಿ

Advertisement

ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ಕೂಡಲೇ ಮೊದಲು ಅಂಜನಾದ್ರಿ ಅಭಿವೃದ್ಧಿಗೆ ೫ ಸಾವಿರ ಕೋಟಿ ರೂ. ತರುವೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ. ವಿಶ್ವದಲ್ಲಿಯೇ ಅಂಜನಾದ್ರಿ ಹನುಮ ಉದಯಿಸಿದ ನಾಡು ನಂ. ೧ ಸ್ಥಾನದಲ್ಲಿ ಬರುವಂತೆ ಶ್ರಮವಹಿಸುತ್ತೇನೆ ಎಂದ ಅವರು, ನಾನು ಯಾರ ವಿರುದ್ಧವೂ ದ್ವೇಷ ಮಾಡಬೇಕು ಎನ್ನುವ ದೃಷ್ಟಿಯಿಂದ ಕೆಆರ್‌ಪಿಪಿ ಕಟ್ಟಿಲ್ಲ ಎಂದು ಅವರು ಹೇಳಿದರು.