ಅಧಿಕಾರಿ ದಂಪತಿ ಮೇಲೆ ಲೋಕಾ ದಾಳಿ

Advertisement

ದಾವಣಗೆರೆ : ರಾಜ್ಯದಲ್ಲಿನ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ದಾಳಿ ಮಾಡುವ ಮೂಲಕ ಬಿಸಿ ಮುಟ್ಟಿಸಿದೆ. ಇಲ್ಲಿನ ಜಯನಗರದಲ್ಲಿ ಮನೆ ಮಾಡಿರುವ ಬಿಬಿಎಂಪಿ ಎಇ ಹೆಚ್. ಭಾರತಿ ದಂಪತಿ ಮತ್ತು ಚನ್ನಗಿರಿಯ ಆರ್‌ಎಫ್‌ಓ ಮನೆ ಮೇಲೆ ಗುರುವಾರ ಬೆಳಗ್ಗೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಹೊಳಲ್ಕೆರೆಯ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಕೆ. ಮಹೇಶ್ ಅವರು ಹೆಚ್. ಭಾರತಿ ಅವರ ಪತಿ. ಹೆಚ್. ಭಾರತಿ ಅವರ ಜಯನಗರದಲ್ಲಿನ ಮನೆ ಮೇಲೆ ಚಿತ್ರದುರ್ಗ ಲೊಕಾಯುಕ್ತ ಎಸ್ಪಿ ವಾಸುದೇವ್ ರಾಮ್ ಹಾಗು ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದ ತಂಡ ದಾಳಿ ನಡೆಸಿದೆ. ದಾಳಿ ವೇಳೆ ಅಪಾರ ಪ್ರಮಾಣದ ಬಂಗಾರ, ಬೆಳ್ಳಿ, ಹಣ ಪತ್ತೆಯಾಗಿದೆ ಎಂದು ಹೇಳಲಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಆರ್‌ಎಫ್‌ಓ ಮನೆ: ಚನ್ನಗಿರಿ ಅರಣ್ಯ ಇಲಾಖೆಯ ಆರ್.ಎಫ್.ಒ ಸತೀಶ್ ಅವರ ಚನ್ನಗಿರಿಯ ಕ್ವಾಟ್ರಸ್ ಮತ್ತು ಶಿವಮೊಗ್ಗದಲ್ಲಿನ ನಿವಾಸದ ಮೇಲೆ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎ. ಕೌಲಾಪುರೆ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಇನ್ಸ್ಪೆಕ್ಟರ್ ನಂದೀಶ್, ಮಧುಸೂಧನ್ ತಂಡ ಶೋಧ ನಡೆಸುತ್ತಿದೆ.