ಅಪಘಾತ: ಓರ್ವ ಸಾವು

Advertisement

ಕುಷ್ಟಗಿ:ತಾಲೂಕಿನ ತಾವರಗೇರಾ ಪಟ್ಟಣದ ಹತ್ತಿರ ಸಿಂಧನೂರು ಡಿಪೋಗೆ ಸೇರಿದ ಕಲ್ಯಾಣ ಕರ್ನಾಟಕ ಸಾರಿಗೆ ಘಟಕದ ಬಸ್ ಒಂದು ವ್ಯಕ್ತಿಯ ಮೇಲೆ ಹಾದು ಹೋಗಿದ್ದು ಸ್ಥಳದಲ್ಲಿಯೇ ವ್ಯಕ್ತಿ ಸಾವನಪ್ಪಿದ ಘಟನೆ ಫೆ.22ರಂದು ಜರುಗಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಲಮಂಗಿ ಗ್ರಾಮದ ಪ್ರಯಾಣಿಕನ ನಾಗಪ್ಪ ಹನಮತ(೫೫) ಎಂದು ಹೇಳಲಾಗುತ್ತಿದೆ. ಸಿಂಧನೂರು ಡಿಪೋ ಬಸ್ಸು ತಾವರಗೇರಾ ಮಾರ್ಗವಾಗಿ ಕುಷ್ಟಗಿ ಕಡೆಗೆ ಬರುತ್ತಿರುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.ತಾವರಗೇರಾ ಬಸ್ ನಿಲ್ದಾಣದ ಸಮೀಪದಲ್ಲಿ ಸಿಂಧನೂರು ಕ್ರಾಸ್ ನಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಸಿ.ಬಸ್ ಮುಂದಕ್ಕೆ ಸಾಗುತ್ತಿರುವ ಸಂದರ್ಭದಲ್ಲಿ ಮೃತಪಟ್ಟ ದುರ್ದೈವಿ ಆಯತಪ್ಪಿ ಬಸ್ಸಿನ ಗಾಲಿಯ ಮೇಲೆ ಬಿದ್ದಿದ್ದಾನೆ.ಟಾಯರ್ ತಲೆ ಮೇಲೆ ಹಾದು ಹೋಗಿರುವುದರಿಂದ ಗುರುತು ಸಿಗದ ಸ್ಥಿತಿಯಲ್ಲಿ ಕಂಡುಬಂದಿದೆ. ಘಟನಾ ಸ್ಥಳಕ್ಕೆ ತಾವರಗೇರಾ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಣ್ಣ ನಾಯಕ್ ಭೇಟಿ ನೀಡಿ ಪರಿಶೀಲಿಸಿದ ಬಳಿಕ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಖಚಿತ‌ ಮಾಹಿತಿ ನೀಡಿದ್ದಾರೆ.
ಮೃತಪಟ್ಟ ದುರ್ದೈವಿಯನ್ನು ತಾವರಗೇರಾ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ಕುಷ್ಟಗಿ ತಾಲೂಕಿನ ಕಸೂರು ಗ್ರಾಮದ ಬಸ್ ಡ್ರೈವರ್ ಸಂಗಯ್ಯ ಶೇಖರಯ್ಯ ಹನುಮನಾಳಮಠ ಚಾಲಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪಿಎಸೈ ತಿಮ್ಮಣ್ಣ ನಾಯಕ್ ಮಾಹಿತಿ ನೀಡಿದ್ದಾರೆ..