ಅಯೋಧ್ಯೆಯಲ್ಲಿ ಕರ್ನಾಟಕ ಬ್ಯಾಂಕ್‌

Advertisement

ಅಯೋಧ್ಯೆ: ಅಯೋಧ್ಯೆಯಲ್ಲಿ ಭಕ್ತರಿಗೆ ಸೇವೆ ಒದಗಿಸಲು ಕರ್ನಾಟಕ ಬ್ಯಾಂಕ್’​​​ನ ನೂತನ ಶಾಖೆಯನ್ನು ಪ್ರಾರಂಭಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಹಂಚಿಕೊಂಡಿರುವ ಕರ್ನಾಟಕ ಬ್ಯಾಂಕ್‌ ಇದು ದೇಶದ 915ನೇ ಶಾಖೆಯಾಗಿದೆ ಎಂದಿದೆ. ಶಾಖೆಯನ್ನ ರಾಮಮಂದಿರ ದೇವಸ್ಥಾನದ ಸಹ ಉಸ್ತುವಾರಿ ಮತ್ತು ಕನ್ನಡಿಗರಾದ ಗೋಪಾಲ್ ನಾಗರಕಟ್ಟೆ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಎಕ್ಸಿಕ್ಯುಟಿವ್ ಡೈರೆಕ್ಟರ್ ಶೇಕರ್ ರಾವ್, ಎಂಡಿ ಶ್ರೀಕೃಷ್ಣನ್ ಹರಿಹರ ಶರ್ಮಾ, ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಸ್ಥಳಿಯರು ಉಪಸ್ಥಿತರಿದ್ದರು.ಅಯೋಧ್ಯೆಯ ರಾಮಪಥದ ಮುಖ್ಯ ರಸ್ತೆಯಲ್ಲಿ ಬ್ಯಾಂಕ್ ಶಾಖೆ ಆರಂಭವಾಗಿದೆ.