ಅಹಮದಬಾದ್‌ನಲ್ಲಿ ಕನ್ನಡ ಭವನ ಸರಕಾರ ನಿಶಾನೆ

Advertisement

ಅಹಮದಬಾದ್: ಗುಜರಾತಿನ ವಾಣಿಜ್ಯ ರಾಜಧಾನಿ ಅಹಮದಬಾದ್‌ನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಇಲ್ಲಿನ ಸರಕಾರ ಹಸಿರು ನಿಶಾನೆ ತೋರಿದೆ.
ಶನಿವಾರ ಇಲ್ಲಿ ನಡೆದ ಅಹಮದಬಾದ್ ಕರ್ನಾಟಕ ಸಂಘದ ಅಮೃತ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿದ್ದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಭಾಯಿ ಪಟೇಲ್ ಈ ಘೋಷಣೆ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ, ಅಹಮದಬಾದ್‌ನಲ್ಲಿ ಕನ್ನಡ ಸಂಘ ಸ್ಥಾಪನೆಯಾಗಿ 75 ವರ್ಷಗಳಾಗಿದ್ದರೂ ಇನ್ನೂ ಕನ್ನಡಿಗರಿಗೆ ಒಂದೆಡೆ ಕಲೆ, ಸಾಂಸ್ಕೃತಿಕ ಚಟುವಟಿಕೆ ನಡೆಸುವುದಕ್ಕೆ ದೊಡ್ಡ ನಗರದಲ್ಲಿ ಜಾಗವಿಲ್ಲದಂತಾಗಿರುವುದರಿಂದ ಗುಜರಾತ್ ಸರಕಾರ ಈ ವಿಷಯ ಸಕಾರಾತ್ಮಕವಾಗಿ ಪರಿಗಣಿಸಬೇಕು ಕನ್ನಡ ಭವನ ನಿರ್ಮಿಸುವಂತೆ ಮುಖ್ಯಮಂತ್ರಿ ಪಟೇಲ್ ಅವರನ್ನು ಕೋರಿದರು. ಗುಜರಾತ್ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ, ಇನ್ನೊಂದು ವರ್ಷದಲ್ಲಿ ಜಮೀನು ನೀಡುವುದಾಗಿ ಪ್ರಕಟಿಸಿದರು. ರಾಜ್ಯದ ಸಂಸದರು, ಶಾಸಕರು, ಗಣ್ಯರು ಇದ್ದರು.