ಆಂಜನೇಯ ರಾಮನ ನಡುವಿನ ಸಂಬಂಧದಂತೆ ಭಜರಂಗದಳ-ಆಂಜನೇಯನ ಸಂಬಂಧ

Advertisement

ಹುಬ್ಬಳ್ಳಿ: ಆಂಜನೇಯ ಮತ್ತು ರಾಮನಿಗೆ ಹೇಗೆ ಸಂಬಂಧವಿದೆಯೋ ಅದೇ ರೀತಿ ಭಜರಂಗದಳ ಮತ್ತು ಆಂಜನೇಯನಿಗೆ ಸಂಬಂಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಆದರ್ಶನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಅವರ ಆಂಜನೇಯನಿಗೂ ಭಜರಂಗದಳಕ್ಕೂ ಏನು ಸಂಬಂಧ ಎನ್ನುವುದಕ್ಕೆ ಉತ್ತರಿಸಿದರು.
ಡಿ.ಕೆ.ಶಿವಕುಮಾರ ತುಷ್ಠೀಕರಣದ ರಾಜಕಾರಣ ಮಾಡುತ್ತಿದ್ದಾರೆ. ಭಜರಂಗದಳ ರಾಮನಿಗೂ ಹನುಮನಿಗೂ ಏನು ಸಂಬಂಧವಿದೆ ಅದೇ ಸಂಬಂಧವಿದೆ ಅದೇ ಸಂಬಂಧ ಭಜರಂಗದಳ ಮತ್ತು ಆಂಜನೇಯ ನಿಗೆ ಸಂಬಂಧವಿದೆ. ಜನರ ಭಾವನೆಗಳನ್ನು ಧಕ್ಕೆ ಮಾಡುವುದು, ಕೆರಳಿಸುವುದು ಸರಿಯಲ್ಲ. ಚುನಾವಣೆಯನ್ನು ನಮ್ಮ ಕಾರ್ಯಕ್ರಮಗಳು, ಭರವಸೆಗಳ ಮೇಲೆ ಮಾಡಬೇಕು. ಅದನ್ನ ಜನರು ತೀರ್ಮಾನ ಮಾಡುತ್ತಾರೆ. ಚುನಾವಣೆಯ ಸಂದರ್ಭದಲ್ಲಿ ಜಾತಿಗಳ ನಡುವೆ ಭಾವನೆಗಳಿಗೆ ಧಕ್ಕೆ ತರಬಾರದು. ಹತಾಶರಾಗಿ ಈ ರೀತಿ ಮಾಡುತ್ತಿದ್ದಾರೆ ಎಂದರು
ಕಾಂಗ್ರೆಸ್ ಪಿಎಫ್ ಐ, ಎಸ್ ಡಿಪಿಐ ಕಪಿಮುಷ್ಠಿಯಲ್ಲಿದೆ. ಪಿಎಫ್ ಐ ಇನ್ನೊಂದು ರೂಪ ಎಸ್ ಡಿಪಿಐ. ಆದರೆ ಪಿಎಫ್ ಐ ಬ್ಯಾನ್ ಆದಾಗ ಇವರು ಬೆಂಬಲಿಸಿಲ್ಲ ಎಂದು ಅವರು ಕೇಳುತ್ತಿದ್ದಾರೆ. ಇಂತವರ ಒತ್ತಡಕ್ಕೆ ಮಣಿದು ಈ ರೀತಿ ಮಾಡುತ್ತಿದ್ದಾರೆ. ಎಸ್ ಡಿಪಿಐ ಬಿಜೆಪಿಯ ಬಿ ಟೀಂ ಆಗಿದ್ದರೆ, ನಾವು ಬ್ಯಾನ್ ಮಾಡುತ್ತಿರಲಿಲ್ಲ ಎಂದರು.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಬಂದರೆ ಸ್ವಾಗತ ಮಾಡುತ್ತೇವೆ. ಕಾಂಗ್ರೆಸ್ ತರಹ ಅಳುವುದಿಲ್ಲ ಎಂದರು.