ಆದಿಪುರುಷ್ ಸಿನಿಮಾ ಜೂನ್ 16ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಮೊದಲ ದಿನವೇ ಚಿತ್ರದ ಕೆಲವು ಡೈಲಾಗ್ಗಳಿಗೆ ಪ್ರೇಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಗ್ರಾಫಿಕ್ ವಿಚಾರವಾಗಿಯೂ ಟೀಕೆ ವ್ಯಕ್ತವಾಗಿತ್ತು. ಇದಾದ ನಂತರ ಸಂಭಾಷಣೆ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್ನಲ್ಲಿ ‘ನಾನು ಇಡೀ ಚಿತ್ರಕ್ಕೆ 4,000ಕ್ಕೂ ಹೆಚ್ಚು ಸಂಭಾಷಣೆಗಳನ್ನು ಬರೆದಿದ್ದೇನೆ, ಆದರೆ ಕೆಲ ಆಯ್ದ ಸಂಭಾಷಣೆಗಳಿಗೆ ಮಾತ್ರ ವಿರೋಧ ವ್ಯಕ್ತವಾಗುತ್ತಿದೆ. 3 ಗಂಟೆಗಳ ಚಲನಚಿತ್ರದಲ್ಲಿ, ನಾನು ನಿಮ್ಮ ಕಲ್ಪನೆಯ ಕೆಲ 3 ನಿಮಿಷಗಳನ್ನು ಪ್ರತ್ಯೇಕಿಸಿರಬಹುದು. ಡೈಲಾಗ್ಸ್ ನಿಮಗೆ ಹಿಡಿಸದೇ ಇರಬಹುದು. ಅದಕ್ಕಾಗಿ ನೀವು ನನ್ನತ್ತ ಬೆರಳು ತೋರಿಸಲು ಪ್ರಾರಂಭಿಸಿದ್ದೀರಿ. ನನ್ನವರೇ ನನ್ನ ವಿರುದ್ಧ ಟೀಕೆ ಮಾಡಿದ್ದಾರೆ. ಆದಿಪುರುಷ್ ಚಿತ್ರದ ಹಾಡುಗಳನ್ನೂ ನಾನೇ ಬರೆದಿದ್ದೇನೆ. ಆದರೆ ಯಾರೂ ಅದನ್ನು ಗಮನಿಸಲಿಲ್ಲ’ ಎಂದು ಹೇಳಿದ್ದಾರೆ. ಮತ್ತು ಈ ಟ್ವೀಟ್ ಏಕೇ ಎಂಬುದನ್ನು ಸಹ ತಮ್ಮ ಸಂದೇಶದಲ್ಲಿ ಬರೆದಿದ್ದಾರೆ ಈ ಪೋಸ್ಟ್ ಏಕೆ?
ಏಕೆಂದರೆ ನನಗೆ ನಿಮ್ಮ ಭಾವನೆಗಿಂತ ದೊಡ್ಡದು ಯಾವುದೂ ಇಲ್ಲ. ನನ್ನ ಡೈಲಾಗ್ಗಳ ಪರವಾಗಿ ನಾನು ಲೆಕ್ಕವಿಲ್ಲದಷ್ಟು ವಾದಗಳನ್ನು ನೀಡಬಲ್ಲೆ, ಆದರೆ ಇದು ನಿಮ್ಮ ನೋವನ್ನು ಕಡಿಮೆ ಮಾಡುವುದಿಲ್ಲ. ನಾನು ಮತ್ತು ಚಿತ್ರದ ನಿರ್ಮಾಪಕ-ನಿರ್ದೇಶಕರು ಕೆಲವು ಡೈಲಾಗ್ಗಳು ನಿಮಗೆ ನೋವುಂಟು ಮಾಡುತ್ತವೆ ಎಂದು ನಿರ್ಧರಿಸಿದ್ದೇವೆ, ನಾವು ಅವುಗಳನ್ನು ಪರಿಷ್ಕರಿಸುತ್ತೇವೆ ಮತ್ತು ಅವುಗಳನ್ನು ಈ ವಾರ ಚಲನಚಿತ್ರಕ್ಕೆ ಸೇರಿಸಲಾಗುತ್ತದೆ. ಶ್ರೀರಾಮನು ನಿಮ್ಮೆಲ್ಲರನ್ನು ಆಶೀರ್ವದಿಸಲಿ! ಎಂದಿದ್ದಾರೆ.