ಈದ್ಗಾದಲ್ಲಿ ಟಿಪ್ಪು ಜಯಂತಿ ಆಚರಣೆ ಅವಕಾಶ,
ನಿರ್ಧಾರ ಪಾಲಿಕೆಗೆ ಬಿಟ್ಟದ್ದು; ಶೆಟ್ಟರ ಪ್ರತಿಕ್ರಿಯೆ

Shettar
Advertisement

ಹುಬ್ಬಳ್ಳಿ : ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡುವುದು ಬಿಡುವುದು ಮಹಾನಗರ ಪಾಲಿಕೆಗೆ ಬಿಟ್ಡ ವಿಚಾರ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.

ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಎಐಎಂಎಂ ಸೇರಿದಂತೆ ಕೆಲ ಸಂಘಟನೆಗಳು ಪಾಲಿಕೆಗೆ ಅವಕಾಶ ಕೋರಿದ ಕುರಿತು ಸೋಮವಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶೆಟ್ಟರ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.
ಈ ವಿಷಯ ಮಹಾನಗರ ಪಾಲಿಕೆಗೆ ಸಂಬಂಧಪಟ್ಟಿದ್ದರಿಂದ ಅದೇ ಸೂಕ್ತ ತೀರ್ಮಾನ ಮಾಡುತ್ತದೆ ಎಂದರು.