ಈದ್ಗಾ ಮೈದಾನ ಶುಚಿಗೊಳಿಸಿದ ಮುತಾಲಿಕ್

ಮುತಾಲಿಕ್‌
Advertisement

ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ ಶುಕ್ರವಾರ ಶ್ರೀರಾಮ ಸೇನೆ ಸಂಘಟನೆಯು ಕನಕದಾಸರ ಜಯಂತಿ ಆಚರಣೆಗೂ ಮುನ್ನ ಮೈದಾನವನ್ನು ಶುಚಿಗೊಳಿಸಿತು.
ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರು, ಗೋಮೂತ್ರವನ್ನು ಮೈದಾನದಲ್ಲಿ ಸಿಂಪರಣೆ ಮಾಡಿದರು.
ಈ ಸಂದರ್ಭದಲ್ಲಿ .ಮಾತನಾಡಿದ ಅವರು, ನಿನ್ನೆ ಈ ಮೈದಾನದಲ್ಲಿ ಮತಾಂಧ, ಹಿಂದೂ ವಿರೋಧಿ ಟಿಪ್ಪುವಿನ ಜಯಂತು ಆಚರಣೆ ಮಾಡಿ ಅಪವಿತ್ರಗೊಳಿಸಲಾಗಿದೆ. ಗೋಮೂತ್ರ ಸಿಂಪರಣೆ ಮಾಡಿ ಈ ಚನ್ನಮ್ಮ ಮೈದಾನವನ್ನು ಶುದ್ಧಗೊಳಿಸುತ್ತಿದ್ದು, ಶುದ್ಧಗೊಳಿಸಿದ ಬಳಿಕ ಕನಕದಾಸರ ಜಯಂತಿ ಆಚರಣೆ ಮಾಡಲಾಗುವುದು ಎಂದರು.