ಎಂಇಎಸ್‌ ಸಂಪೂರ್ಣ ಸತ್ತು ಹೋಗಿದೆ: ಲಕ್ಷ್ಮಣ ಸವದಿ

lakshmansavadi
Advertisement

ಅಥಣಿ(ಬೆಳಗಾವಿ): ಎಂಇಎಸ್‌ ಸಂಪೂರ್ಣ ಸತ್ತು ಹೋಗಿದೆ. ಅಸ್ತಿತ್ವಕ್ಕಾಗಿ ಹೆಣುಗುತ್ತಿದೆ. ಬೆಳಗಾವಿಯಲ್ಲಿ ಅದು ತನ್ನ ಪುಂಡಾಟಿಕೆಯನ್ನು ಬಿಡಬೇಕು. ಸತ್ತ ಹೆಣಕ್ಕೆ ಜೀವ ತುಂಬಿದರೆ ಏನಾದರೂ ಪ್ರಯೋಜನವಿದೆಯೇ ಎಂದು ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಖಾರವಾಗಿ ಪ್ರಶ್ನಿಸಿದ್ದಾರೆ.
ಅಥಣಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವ್ಯಾರೂ ಇಲ್ಲಿ ಬಳೆ ತೊಟ್ಟಿಲ್ಲ ಎಂಬ ಅರಿವು ಆ ಸಂಘಟನೆಯವರಿಗಿರಲಿ ಎಂದು ಎಚ್ಚರಿಕೆ ನೀಡಿದ್ದಾರೆ.