ಶಿವಮೊಗ್ಗ: ಕಜಕಿಸ್ತಾನದಿಂದ ಬೆದರಿಕೆ ಕರೆ ಬಂದಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ಎಸ್ಪಿಗೆ ದೂರು ನೀಡಿದ್ದಾರೆ.
ಭಾನುವಾರ ರಾತ್ರಿ ಸುಮಾರು 12.30ರ ಸುಮಾರಿಗೆ, ನನಗೆ ಕಜಕಿಸ್ತಾನದಿಂದ ಬೆದರಿಕೆ ಕರೆ ಬಂದಿದೆ. ನಾನು ಮಲಗಿದ್ದ ವೇಳೆ ಮೊಬೈಲ್ ಸೈಲೆಂಟ್ ಮಾಡಿಟ್ಟಿದ್ದೆ. ಈ ವೇಳೆ ನನ್ನ ವಾಟ್ಸಪ್ಗೆ ಮಿಸ್ಡ್ ಕಾಲ್ ಬಂದಿದೆ. ಬೆಳಿಗ್ಗೆ ಎದ್ದು ಈ ಕರೆ ನೋಡಿದಾಗ ಇದು ಕಜಾಕಿಸ್ತಾನದ್ದೆಂದು ತಿಳಿದುಬಂದಿದೆ. ಕಜಕಿಸ್ತಾನದಿಂದ ಬಂದಿರುವ ಕರೆ ಎಂದರೆ, ಅದು ನನಗೆ ಬೆದರಿಕೆ ಒಡ್ಡಲೆಂದೇ ಮಾಡಲಾದ ಕರೆ, ಈ ಸಂಬಂಧ ಶಿವಮೊಗ್ಗ ಜಿಲ್ಲಾ ಎಸ್ಪಿ ಅವರಿಗೆ ದೂರು ನೀಡಿದ್ದಾರೆ.