ಕಣ್ಣಿಗೆ ಖಾರದ ಪುಡಿ ಎರಚಿ ಆರು ಲಕ್ಷ ರೂ. ಲೂಟಿ

ಖಾರದ ಪುಡಿ
Advertisement

ಹಗರಿಬೊಮ್ಮನಹಳ್ಳಿ: ಕಣ್ಣಿಗೆ ಖಾರದ ಪುಡಿ ಎರಚಿ 6 ಲಕ್ಷ ರೂಪಾಯಿ ಹಣದ ಚೀಲ ಎಗರಿಸಿಕೊಂಡು ಹೋದ ಘಟನೆ ಪಟ್ಟಣದ ಬಸವೇಶ್ವರ ಬಜಾರದಲ್ಲಿ ಮಂಗಳವಾರ ನಡೆದಿದೆ.
ಹಗರಿಬೊಮ್ಮನಹಳ್ಳಿಯ ವರ್ತಕ ಶ್ರೀವಾಸ ಶೆಟ್ಟಿ ಎಂಬವರು ಅಂಗಡಿ ಗುಮಾಸ್ತ ಸಂತೋಷ ಅವರ ಕೈಯಲ್ಲಿ 6 ಲಕ್ಷ ರೂಪಾಯಿ ನಗದು ಹಣವನ್ನು ಬ್ಯಾಗ್‌ನಲ್ಲಿ ಹಾಕಿ ಪಟ್ಟಣದ ಮಾನ್ವಿ ಪಟ್ಟಣ ಸಹಕಾರಿ ಬ್ಯಾಂಕಿಗೆ ಕಟ್ಟಲು ಕಳುಹಿಸಿದ್ದರು. ಹಣದ ಚೀಲ ಹಿಡಿದುಕೊಂಡು ಎಸ್‌ಬಿಐ ರೈಲ್ವೆ ಗೇಟ್‌ನಿಂದ ಒಳಗಡೆ ನಿರ್ಜನ ಪ್ರದೇಶದಲ್ಲಿ ಹೋಗುತ್ತಿದ್ದಾಗ
ಅಪರಿಚಿತ ವ್ಯಕ್ತಿ ಸಂತೋಷನ ಕಣ್ಣಿಗೆ ಖಾರದ ಪುಡಿ ಎರಚಿದ. ೬ ಲಕ್ಷ ರೂ. ಹಣದ ಬ್ಯಾಗ್‌ನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ನಂತರ ಸ್ಥಳಕ್ಕೆ ಪಿಎಸ್‌ಐ ಸರಳಾ ಅವರು ಆಗಮಿಸಿ ಪರಿಶೀಲನೆ ಮಾಡಿದರು. ಮಾಲೀಕ ಶ್ರೀವಾಸ ಶೆಟ್ಟಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕ್ರಮ ಕೈಗೊಂಡಿದ್ದಾರೆ.