ಕನಿಷ್ಠ ೨೦ ಸಾವಿರ ಮತಗಳಿಂದ ಗೆಲುವು ನಿಶ್ಚಿತ

ಯತ್ನಾಳ
Advertisement

ವಿಜಯಪುರ: ಅಭಿವೃದ್ಧಿ ಆಧಾರದ ಮೇಲೆ ಮುಂದಿನ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸುಮಾರು ೨೦ ಸಾವಿರ ಮತಗಳಿಂದ ನನ್ನ ಗೆಲುವು ನಿಶ್ಚಿತ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಬಸನಗೌಡರು ಗೆದ್ದರೆ ನಮ್ಮ ಬೆಳವಣಿಗೆಗೆ ಹೊಡೆತ ಬೀಳುತ್ತದೆ ಎಂದು ಹಲವರು ಕಳೆದ ವಿಧಾನಸಭಾ ಚುನಾವಣೆಯಲ್ಲೇ ಸೋಲಿಸಲು ಪ್ರಯತ್ನಿಸಿದ್ದರು. ಪಾಲಿಕೆ ಚುನಾವಣೆಯಲ್ಲೂ ನನ್ನ ಪ್ರಭಾವ ಏನಿಲ್ಲ ಅಂತ ತೋರಿಸಲು ನಮ್ಮ ಅಭ್ಯರ್ಥಿಗಳನ್ನು ಸೋಲಿಸಲು ಕೊಟ್ಯಂತರ ಹಣ ನೀಡಿದ್ದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಮುಧೋಳ, ಶಿವಮೊಗ್ಗ, ಗೋಕಾಕ ಕಡೆಯಿಂದ ಹಣ ಬರುವುದು ಇದೆ. ಲೂಟಿ ಮಾಡಿ ಗಳಿಸಿದ ಹಣ ಪಡೆದು, ನನಗೆ ಮತ ನೀಡಿ ಎಂದು ಮನವಿ ಮಾಡಿದರು.