ಕನ್ನಡ ಭವನಕ್ಕೆ ಜಾಗ ನೀಡಲು ಡಾ ಸಾವಂತ್‌ಗೆ ಬೊಮ್ಮಾಯಿ ಪತ್ರ

ಕನ್ನಡ ಭವನ
Advertisement

ಪಣಜಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ೧ ರಿಂದ ೨ ಎಕರೆ ಜಾಗ ನೀಡುವಂತೆ ಕೋರಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್‌ರಿಗೆ ಪತ್ರ ಬರೆದಿದ್ದಾರೆ. ಕರ್ನಾಟಕ ಸರ್ಕಾರವು ಗೋವಾದಲ್ಲಿ ಕನ್ನಡಿಗರ ಬಹು ವರ್ಷಗಳ ಬೇಡಿಕೆ ಕನ್ನಡ ಭವನ ನಿರ್ಮಾಣಕ್ಕೆ ಪ್ರಸಕ್ತ ೨೦೨೨-೨೩ರ ಕರ್ನಾಟಕ ಬಜೆಟ್‌ನಲ್ಲಿ ನಿಧಿ ಕಾಯ್ದಿರಿಸಿದ್ದು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಭವನ ನಿರ್ಮಾಣ ಮಾಡಲಿದೆ.