ಕರ್ನಾಟಕ ಇಡೀ ದೇಶದಲ್ಲಿ ಪ್ರಸಿದ್ಧವಾದ ನಾಡು

Advertisement

ಕೊಪ್ಪಳ: ರಾಜ್ಯದಲ್ಲಾಗಿರುವ ಅಭಿವೃದ್ಧಿ ಕುರಿತು ಎಲೆಕ್ಷನ್ ಮಾಡುವ ಧೈರ್ಯ ಬಿಜೆಪಿಗಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ, ಕೊಪ್ಪಳದ ಕನಕಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್​ ಸಭೆಯನ್ನು ಉದ್ದೇಶಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ಬಿಜೆಪಿ ಸರ್ಕಾರ ನಿಮಗೆ ಏನು ಮಾಡಿದೆ. ಕಾಂಗ್ರೆಸ್ ಏನು ಹೇಳಿದೆ ಅದನ್ನು ನೆನಪಿಸಿಕೊಳ್ಳಿ. ಕಾಂಗ್ರೆಸ್ ಪಕ್ಷವನ್ನ ಪೂರ್ಣ ಬಹುಮತದೊಂದಿಗೆ ಗೆಲ್ಲಿಸಿ. ದುರ್ಬಲ ಸರ್ಕಾರ ಬಂದರೆ, ಅದನ್ನ ಉಳಿಸಿಕೊಳ್ಳುವುದಕ್ಕೆ ಹೋರಾಡುತ್ತಾರೆ. ನೀವು ಈ ಬಾರಿ ಸ್ವಾಭಿಮಾನದಿಂದ ಮತಚಲಾಯಿಸಿ. ಆಗ ಇಡೀ ದೇಶ ನಿಮ್ಮ ಕಡೆಗೆ ತಿರುಗಿ ನೋಡುತ್ತದೆ. ಯಾಕೆಂದರೆ, ನೀವು ಗರ್ವ, ಸ್ವಾಭಿಮಾನದಿಂದ ರಚಿಸಿದ ಸರ್ಕಾರ ಆಗಿರುತ್ತೆದೆ. ಇದು ಕನ್ನಡದ ಸ್ವಾಭಿಮಾನದ ಸರ್ಕಾರ ಆಗಿರುತ್ತದೆ, ಕರ್ನಾಟಕ ಇಡೀ ದೇಶದಲ್ಲಿ ಪ್ರಸಿದ್ಧವಾದ ನಾಡು. ಜಗತ್ತಿನ ದೊಡ್ಡ ಕಂಪನಿಗಳ ಸಿಇಓ ಈ ನಾಡಿನ ಪುಣ್ಯಭೂಮಿಯವರು. ಒಂದು ಸಮಯದಲ್ಲಿ ಈ ರಾಜ್ಯ, ಐಟಿ, ತಂತ್ರಜ್ಞಾನ ಹಾಗೂ ಶಿಕ್ಷಣ ಸೇರಿದಂತೆ ಎಲ್ಲ ವಿಭಾಗದಲ್ಲಿ ಮುಂದಿತ್ತು. ಕಳೆದ ಬಾರಿ ನೀವು ಮತಹಾಕಿ ಒಂದು ಸರ್ಕಾವರನ್ನು ತಂದಿದ್ದೀರಿ. ಆದರೆ, ಬಿಜೆಪಿ ತನ್ನ ಹಂಬಲದಿಂದ ಸರ್ಕಾರವನ್ನ ಬೀಳಿಸಿತು. ಆಪರೇಷನ್ ಕಮಲ‌ ಮಾಡಿ ಬಿಜೆಪಿ ಸರ್ಕಾರ ರಚನೆ ಮಾಡಿದರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. 40 ಪರ್ಸೆಂಟ್‌ ಸರ್ಕಾರ ಎನ್ನುವ ಹಣೆ ಪಟ್ಟಿ ಕಟ್ಟಿಕೊಂಡು ದೇಶದಲ್ಲಿ ಕರ್ನಾಟಕದ ಹೆಸರು ಹಾಳು ಮಾಡುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದ್ದೆ ವಾಮಮಾರ್ಗದಿಂದ ಕೈ ಶಾಸಕರಿಗೆ ಹಣದ ಆಮೀಷ ಒಡ್ಡುವ ಆಪರೇಷನ್ ಕಮಲದ ಹೆಸರಿನಲ್ಲಿ ಸರ್ಕಾರ ರಚನೆ ಮಾಡಿ ರಾಜ್ಯ ಲೂಟಿ ಮಾಡುವ ಕೆಲಸ ಬಿಜೆಪಿ ಮಾಡಿದೆ ಎಂದರು.