ಕರ್ನಾಟಕ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ

ರಾಹುಲ್‌ ಗಾಂಧಿ
Advertisement

ಬೆಳಗಾವಿ: ಕರ್ನಾಟಕದ ಪ್ರಸ್ತುತ ಬಿಜೆಪಿ ಸರಕಾರ ದೇಶದ ಅತ್ಯಂತ ಭ್ರಷ್ಟ ಸರಕಾರ. ಇದು 40 ಪರ್ಸೆಂಟ್ ಸರ್ಕಾರವಾಗಿದ್ದು, ಈ ಸರ್ಕಾರದಿಂದ ಜನ ದಿನೇ ದಿನೇ ಸಂಕಷ್ಟ ಅನುಭವಿಸವಂತಾಗಿದೆ ಎಂದು ಕಾಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಯುವ ಕ್ರಾಂತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದ ಸರಕಾರ ಭ್ರಷ್ಟ ಸರಕಾರ, ೪೦ ಪರ್ಸೆಂಟ್ ಸರಕಾರ ಎಂದು ಇಲ್ಲಿನ ಗುತ್ತಿಗೆದಾರರು ಹೇಳಿದ್ದಾರೆ. ಕರ್ನಾಟಕದ ಯಾವುದೇ ಯುವಕರನ್ನು ಕೇಳಿದರೂ ಹೇಳುತ್ತಾರೆ. ಪಿಎಸ್‌ಐ ಹುದ್ದೆಯಲ್ಲಿ ಭ್ರಷ್ಟಾಚಾರ, ಉಪನ್ಯಾಸಕರ ಹುದ್ದೆಯಲ್ಲಿ ಭ್ರಷ್ಟಾಚಾರ, ಮೈಸೂರು ಸ್ಯಾಂಡಲ್‌ನಲ್ಲಿ ಶಾಸಕರ ಮಗನ ಬಳಿಯೆ ೮ ಕೋಟಿ ರೂ. ಸಿಕ್ಕಿತು. ಯಾವುದರಲ್ಲಿ ನೋಡಿದರೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇದರಿಂದ ರೋಸಿ ಹೋಗಿರುವ ಜನರು ಈ ಬಾರಿ ಸ್ಪಷ್ಟ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.