ಕಲಾದಗಿಯಲ್ಲಿ ಸಚಿವ ಅಶೋಕ ಗ್ರಾಮ ವಾಸ್ತವ್ಯ

Advertisement

ಬಾಗಲಕೋಟೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕಾಗಿ ಬೀಳಗಿ ವಿಧಾನಸಭಾ ಕ್ಷೇತ್ರದ ಕಲಾದಗಿ ಗ್ರಾಮಕ್ಕೆ ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಗದ್ದನಕೇರಿ ಕ್ರಾಸ್ ಬಳಿ ಮುಖಂಡರು ಅಧಿಕಾರಿಗಳು ಸಚಿವರನ್ನು ಬರಮಾಡಿಕೊಂಡರು. ನಂತರ ಸುಕ್ಷೇತ್ರ ತುಳಸಗಿರಿಯಲ್ಲಿ ಆಂಜನೇಯನ ದರ್ಶನ ಪಡೆದ ಸಚಿವರು ನಂತರ ಕಲಾದಗಿ ಗ್ರಾಮಕ್ಕೆ ಆಗಮಿಸಿದರು. ಗ್ರಾಮದ ಶ್ರೀ ಸಾಯಿಮಂದಿರದಿಂದ ಟ್ರ್ಯಾಕ್ಟರ್ ಹತ್ತಿ ಮೆರವಣಿಗೆಯಲ್ಲಿ ಬಂದ ಸಚಿವರನ್ನು ಗ್ರಾಮದ ಮಹಿಳೆಯರು ಕುಂಭ ಹೊತ್ತು ಸ್ವಾಗತಿಸಿದರು.


ತಳಿರು ತೋರಣಗಳಿಂದ ಶೃಂಗಾರಗೊಂಡಿದ್ದ ಎತ್ತಿನ ಬಂಡಿಗಳು, ಜಾನಪದ ಕಲಾತಂಡಗಳ ವೈಭವ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಿಸಿತು. ಸಚಿವರಿಗೆ ಮಹಿಳೆಯರು ಆರತಿ ಬೆಳಗಿದರು‌ ನಂತರ ಗ್ರಾಮದ ಶ್ರೀಗುರುಲಿಂಗೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸವಲತ್ತುಗಳನ್ನು ಸಚಿವ ಅಶೋಕ ಹಾಗೂ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಮುರುಗೇಶ ನಿರಾಣಿ ವಿತರಿಸಿದರು.