ಕಾಫಿತೋಟದಲ್ಲಿ ಕಾಡಾನೆಗಳ ಹಿಂಡು

Advertisement

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು ಅಡಿಕೆ, ಕಾಫಿತೋಟಗಳಿಗೆ ಲಗ್ಗೆ ಇಟ್ಟು ಬೆಳೆಹಾನಿ ಮಾಡುತ್ತಿವೆ.
ಮಳೆ ಕೊರತೆಯಿಂದ ಕಂಗಲಾಗಿರುವ ರೈತರು ಮತ್ತು ಬೆಳೆಗಾರರು ಕಾಡಾನೆ ಉಪಟಳಕ್ಕೆ ಬೇಸತ್ತು ಹೋಗಿದ್ದಾರೆ.
ಚಿಕ್ಕಮಗಳೂರು ತಾಲೂಕು ಕಣತಿ ಗ್ರಾಮದ ಚಿಕ್ಕಮಗಳೂರು-ಶೃಂಗೇರಿ ರಾಷ್ತ್ರೀಯ ಹೆದ್ದಾರಿ ಸಮೀಪದ ಕಾಫಿತೋಟದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ಆನೆ ರಸ್ತೆ ದಾಟುತ್ತಿರುವುದನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಗುಂಪಿನಲ್ಲಿ 7 ಕಾಡಾನೆಗಳು ಇದ್ದು ಕಳೆದೊಂದು ತಿಂಗಳಿಂದ ಈ ಭಾಗದಲ್ಲಿ ಉಪಟಳ ನೀಡುತ್ತಿವೆ. ಅಡಿಕೆ, ಕಾಫಿ, ಭತ್ತದ ಗದ್ದೆಗಳಿಗೆ ದಾಳಿ ಇಟ್ಟು ಬೆಳೆ ನಾಶಪಡಿಸುತ್ತಿದ್ದು ಕಾಡಾನೆಗಳ ಉಪಟಳದಿಂದ ಇಲ್ಲಿನ ಜನರು ಬೇಸತ್ತು ಹೋಗಿದ್ದಾರೆ. ಕಾಡಾನೆಗಳನದನ್ನು ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಮುಂದಾಗಬೇಕೆಂದು ಇಲ್ಲಿನ ಜನರು ಆಗ್ರಹಿಸಿದ್ದಾರೆ.