ಕಾರು ಅಪಘಾತ, ಪಾರಾದ ಕಾಡಸಿದ್ದೇಶ್ವರ ಶ್ರೀಗಳು

ಕಾಡಸಿದ್ದೇಶ್ವರ ಶ್ರೀ
Advertisement

ಗುಳೇದಗುಡ್ಡ ಸಮೀಪದ ತೋಗುಣಸಿ ತಾಂಡಾ ಬಳಿ ಕಾರು ಅಪಘಾತವೊಂದು ಸಂಭವಿಸಿದ ಘಟನೆ ಮಂಗಳವಾರ ನಡೆದಿದೆ. ಪಟ್ಟಣದ
ಬಾಗಲಕೋಟೆಯ ಮರಡಿಮಠದ ಶ್ರೀಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯರು ತೆರಳುತ್ತಿದ್ದ ಕಾರು ತೋಗುಣಸಿ ತಾಂಡಾ ಹತ್ತಿರದ ರಸ್ತೆ ಪಕ್ಕದ ಮರವೊಂದಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಅವಘಡದಲ್ಲಿ ಶ್ರೀಅಭಿನವ ಕಾಡಸಿದ್ದೇಶ್ವರ ಶ್ರೀಗಳು ಹಾಗೂ ಚಾಲಕ ಮತ್ತು ಅವರ ಜತೆಗಿದ್ದ ಇನ್ನೊಬ್ಬ ವ್ಯಕ್ತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗದಗ ಜಿಲ್ಲೆಯ ಹಾಲ್ಕೇರಿ ಅನ್ನದಾನೇಶ್ವರ ಮಠದ ಕಾರ್ಯಕ್ರಮ ಮುಗಿಸಿ ಬಾದಾಮಿ ಮಾರ್ಗವಾಗಿ ಗುಳೇದಗುಡ್ಡಕ್ಕೆ ಆಗಮಿಸುತ್ತಿದ್ದ ವೇಳೆ ತೋಗುಣಸಿ ಹತ್ತಿರ ಈ ಅವಘಡ ಉಂಟಾಗಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶ್ರೀಗಳ ತಲೆಗೆ ಪೆಟ್ಟು ಬಿದಿದ್ದು, ಚಾಲಕ ಮತ್ತು ಅವರೊಟ್ಟಿಗಿದ್ದ ಇನ್ನೋರ್ವನಿಗೆ ಒಳಪೆಟ್ಟಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಡಸಿದ್ದೇಶ್ವರ ಶ್ರೀ