ಕಾರು-ಟ್ಯಾಂಕರ್ ಢಿಕ್ಕಿ: ಮೂವರ ಸಾವು

Advertisement

ಕಲಘಟಗಿ: ರಾಷ್ಟ್ರೀಯ ಹೆದ್ದಾರಿ ೬೩ರ ಹುಬ್ಬಳ್ಳಿ ಕಾರವಾರ ರಸ್ತೆ ಬಳಿ ಕಾರು ಟ್ಯಾಂಕರ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.
ಎನ್.ಎಚ್ ೬೩ ಸಂಗಟಿಕೊಪ್ಪ ಬಳಿ ಕಾರವಾರದಿಂದ ಹುಬ್ಬಳ್ಳಿಗೆ ಸಾಗುತ್ತಿದ್ದ ಟ್ಯಾಂಕರ್ ಹುಬ್ಬಳ್ಳಿಯಿಂದ ಕಾರವಾರಕ್ಕೆ ಹೋಗುತ್ತಿದ ಕಾರು ಮಧ್ಯೆ ಅಪಘಾತ ಸಂಭವಿಸಿ ಹುಬ್ಬಳಿಯ ನಿವಾಸಿಗಳಾದ ಮಹಮ್ಮದದಿಶಾನ್ ಬಿಡಿವಾಲೆ, ಮಹಮ್ಮದತೈಪ ಚವ್ಹಾನ ಸ್ಥಳದಲ್ಲೇ ಮೃತಪಟ್ಟಿದ್ದು, ಇಸ್ಮಾಯಿಲ್ ಬಿಡಿವಾಲೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನಪ್ಪಿದ್ದು, ಉಳಿದ ಮೂವರು ಗಾಯಾಳುಗಳಾದ ಉಮರ ಕರ್ನೂಲಕರ, ಫಯಾಜ್‌ಅಹ್ಮದ ಖಾಲಿಮದಾರ, ಅಬ್ರಾಜ್ ವದ್ದು ಇವರನ್ನು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದ್ದು, ಟ್ಯಾಂಕರ ಚಾಲಕನ ಬಗ್ಗೆ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪಿ.ಐ. ಶ್ರೀಶೈಲ ಕೌಜಲಗಿ ಭೇಟಿ ನೀಡಿದ್ದು, ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.