ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆ: ಯುವಕ ಸಾವು

Advertisement

ಕೊಪ್ಪಳ(ಹುಲಿಗಿ): ಸಮೀಪದ ಗಿಣಗೇರಿ ಕಲ್ಯಾಣಿ ಕಾರ್ಖಾನೆಯಲ್ಲಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಜರುಗಿದೆ.
ಹಿಟ್ನಾಳ್ ಗ್ರಾಮದ ರಾಘವೇಂದ್ರ ಗೊಂದಳ್ಳಿ(೩೯) ಮೃತಪಟ್ಟ ಯುವಕ. ಕೊಪ್ಪಳ ತಾಲೂಕು ಗಿಣಗೇರಿ ಸಮೀಪದ ಕಲ್ಯಾಣಿ ಕಾರ್ಖಾನೆಯಲ್ಲಿ ಇಲೆಕ್ಟ್ರಿಕಲ್ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದರು. ರಾತ್ರಿ ಪಾಳಿಯಲ್ಲಿದ್ದಾಗ ಬುಧವಾರ ಬೆಳಿಗ್ಗೆ ೫ ಗಂಟೆಗೆ ಸಿ.ಓ- ೨ ಗ್ಯಾಸ್ ಲೀಕೇಜ್ ಆಗಿ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ.