ಕೆಪಿಸಿಸಿ ನೂತನ ಪದಾಧಿಕಾರಿಗಳ ನೇಮಕ

Advertisement

ಕೊಪ್ಪಳ: ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ ಅವರನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಏಳು ಜಿಲ್ಲೆಗಳಿಗೆ ನೂತನ ಅಧ್ಯಕ್ಷರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,ಕೊಪ್ಪಳ – ಅಮರೇಗೌಡ ಭಯ್ಯಾಪುರ,ಬಳ್ಳಾರಿಗೆ ಪ್ರಶಾಂತ್ ಅಲ್ಲಂ ವೀರಭದ್ರಪ್ಪ, ಬೆಂಗಳೂರು ಪೂರ್ವಕ್ಕೆ ಕೆ.ನಂದಕುಮಾರ್, ಹಾವೇರಿಗೆ ಸಂಜೀವ್ ಕುಮಾರ್ ನೀರಲಗಿ,ಉಡುಪಿಗೆ ಕೃಷ್ಣ ಹೆಗಡೆ,
ರಾಯಚೂರುಗೆ ಬಸವರಾಜ್ ಇಟಗಿ ಹಾಗೂ
ಶಿವಮೊಗ್ಗಕ್ಕೆ ಆರ್ ಪ್ರಸನ್ನ ಕುಮಾರ್, ನೇಮಿಸಲಾಗಿದೆ. ಇದರೊಂದಿಗೆ 43 ಕೆಪಿಸಿಸಿ ಉಪಾಧ್ಯಕ್ಷರು ಮತ್ತು 138 ಪ್ರಧಾನ ಕಾರ್ಯದರ್ಶಿಗಳು ಸೇರಿ ವಿವಿಧ ಪದಾಧಿಕಾರಿಗಳನ್ನು ನೇಮಿಸಲಾಗಿದೆ.