ಕೇಜ್ರೀವಾಲ್ ಅವರೇ ಸಿಎಂ ಆಗಿರುತ್ತಾರೆ

Advertisement

ದೆಹಲಿ ಸರ್ಕಾರ ಅಬಕಾರಿ ಕೇಜ್ರೀ­ವಾಲ್ ಅವರನ್ನು ಬಂಧಿಸಿದರೂ, ಅವರೇ ದೆಹಲಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಆಪ್ ನಾಯಕಿ ಆತಿಶಿ ಹೇಳಿದ್ದಾರೆ. ಈ ಹಿಂದೆ ಕೇಜ್ರೀವಾಲ್ ಅವರನ್ನು ಬಂಧಿಸಿದಲ್ಲಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೇ ಅಥವಾ ಬೇಡವೇ ಎಂದು ಸಮೀಕ್ಷೆ ನಡೆಸಲಾಗಿತ್ತು. ಅದರಲ್ಲಿ ದೆಹಲಿಯ ಬಹುತೇಕ ನಾಗರಿಕರು, ಕೇಜ್ರೀವಾಲ್ ಮುಂದುವರಿಯಬೇಕು ಎಂದು ಅಪೇಕ್ಷೆ ಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರು ಮುಂದುವರಿಯಲಿದ್ದಾರೆ ಎಂದು ಆತಿಶಿ ಸ್ಪಷ್ಪಪಡಿಸಿದ್ದಾರೆ.