ಕೋಟಿ ಕಂಠದಲ್ಲಿ ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು..!

Bagalkot
Advertisement

ಬಾಗಲಕೋಟೆ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಜಿಲ್ಲೆಯಾದ್ಯಂತ ಶುಕ್ರವಾರ ನಡೆದ ಕೋಟಿ ಕಂಠ ಗಾಯನ ಸಮಾರಂಭವು ಜನಮನ ಸೆಳೆಯಿತು.
ಜಿಲ್ಲಾ ಕೇಂದ್ರ ಬಾಗಲಕೋಟೆಯ ಜಿಲ್ಲಾಡಳಿತ ಭವನ, ಬಸವೇಶ್ವರ ವರ್ತುಲದಲ್ಲಿ ಜರುಗಿಗ ಕಾರ್ಯಕ್ರಮಗಳಲ್ಲಿ ಮಕ್ಕಳು, ಸಾರ್ವಜನಿಕರು ಅಧಿಕಾರಿಗಳು ನಾಡಗೀತೆ ಹಾಗೂ ಕನ್ನಡದ ಭಾವಗೀತೆಗಳಿಗೆ ಧ್ವನಿಯಾದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಡಿಸಿ ಪಿ.ಸುನೀಲಕುಮಾರ, ಜಿಪಂ ಸಿಇಒ ಟಿ.ಭೂಬಾಲನ್, ಎಡಿಸಿ‌ ಮಹಾದೇವ ಮುರಗಿ ಮತ್ತಿತರು ಭಾಗವಹಿಸಿ ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು ಗೀತೆಗೆ ಧ್ವನಿಯಾದರು.