ಕೊರಿಯರ್ ಟ್ರ್ಯಾಕ್ ಮಾಡಲು ಗೂಗಲ್ನಲ್ಲಿ ಸರ್ಚ್ ಮಾಡಿದ ನಂಬರ್ಗೆ ಕರೆ ಮಾಡಿದ ಧಾರವಾಡದ ಮೇದಾರ ಓಣಿಯ ಸಂತೋಷ ಎಂಬ ವ್ಯಕ್ತಿ ೯೯.೪೯೮ ರೂ ಕಳೆದುಕೊಂಡಿದ್ದಾರೆ. ವಂಚಕರು ಹೇಳಿದಂತೆ ಸಂತೋಷ ಪೋನ್ ಪೇ ಮೂಲಕ ಯುಪಿಐ ಪಿನ್ ಹಾಕಿದ್ದೇ ತಡ ಬೆಳಗಾಗುವುದರಲ್ಲಿ ವಂಚಕರು ಹಣ ದೋಚಿದ್ದಾರೆ. ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.