ಗಡಿ ವಿವಾದ ಮಹಾರಾಷ್ಟ್ರದವರು ರಾಜಕೀಯ ಲಾಭಕ್ಕೆ ಬಳಕೆ – ಮಾಜಿ ಸಿಎಂ ಶೆಟ್ಟರ್ ಆರೋಪ

JAGDISH SHETTAR
Advertisement

ಹುಬ್ಬಳ್ಳಿ: ಬೆಳಗಾವಿಯಲ್ಲಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರದವರು ಅನಗತ್ಯವಾಗಿ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದರು.
ಹುಬ್ಬಳ್ಳಿಯ ಬೈರಿದೇವರಕೊಪ್ಪದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ನಾಟಕದ
ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿದ್ದು, ಅದರ ವಿಚಾರಣೆ ನಡೆಯುತ್ತಿದೆ. ಮಹಾರಾಷ್ಟ್ರದವರೇ ಸುಪ್ರೀಂ ಕೋರ್ಟ್ ಗೆ ‌ಮೊದಲು ಹೋಗಿದ್ದು ಆದರೆ ಈಗ ಸುಪ್ರೀಂ ಕೋರ್ಟ್ ನಲ್ಲಿ ಇತ್ಯರ್ಥವಾಗಬೇಕು. ಅದು ಆಗುವ ಮುನ್ನವೇ ಜಗಳ ಮಾಡಿಕೊಂಡು ವಿನಾಕಾರಣ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಅದು ಪೈನಲ್ ಇತ್ಯರ್ಥ ಆಗಬೇಕು ಆಮೇಲೆ ಆ ಬಗ್ಗೆ ಸಹ ಮಾತನಾಡಲಿ ಎಂದ ಅವರು, ಎಂಇಎಸ್ ನವರನ್ನ ಬಿಟ್ಟು ರಾಜಕೀಯ ಉದ್ದೇಶಕ್ಕೆ ಗಡಿ ವಿವಾದ ಬಳಸಿಕೊಳ್ಳಲು ಪ್ರಯತ್ನ ಮಾಡಲುಮುಂದಾಗಿದ್ದು ಇದು ಸರಿಯಲ್ಲ ಎಂದರು.
ಇನ್ನು ಗಡಿ ವಿವಾದ ಕುರಿತು ಮುಂದುವರಿದು ಮಾತನಾಡಿದ ಅವರು, ಮಹಾಜನ್ ವರದಿಯೇ ಅಂತಿಮ ಎಂದು ಇದನ್ನ ಮಹಾರಾಷ್ಟ್ರದವರೇ ಒಪ್ಪಿಕೊಂಡರಿದ್ದಾರೆ ಆದರೆ ಈಗ ಯಾಕೆ ತಕಾರರು ಎಂದು ಪ್ರಶ್ನೆ ಮಾಡಿದರು ಈಗ ಅನಗತ್ಯವಾದ ಜಗಳವನ್ನು ಮಹಾರಾಷ್ಟ್ರಸವರು ತೆಗೆಯುತಿದ್ದಾರೆ ಕರ್ನಾಟಕ ಬಸ್ ಗಳಿಗೆ ಎಂಇಎಸ್ ಕಾರ್ಯಕರ್ತರಿಂದ ಕಲ್ಲು ಎಸೆದು ಗಲಾಟೆ ಮಾಡುತಿದ್ದು ಇದು ಸರಿಯಾದ ಕ್ರಮವಲ್ಲ ಎಂದ ಅವರ ಇಂತಹ ಅಹಿತಕರ ಘಟನೆಗಳು ಮಹಾರಾ ಷ್ಟಸಬಭಾಭಾರದವರಿಂದಲೇ ನಡೆಯುತ್ತಿದೆ ಎಂದು ಗಂಭೀರ ಸ್ವರೂಪದ ಆರೋಪ ಮಾಡಿದರು.
ನಾಯಕರಿಂದ ತೀರ್ಮಾನ
ವಿಧಾನ ಪರಿಷತ್ ಸಭಾಪತಿ ಸ್ಥಾನ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಡಿಸೆಂಬರ್ 19 ರಂದು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಮುಹೂರ್ತ ಪಿಕ್ಸ್ ಮಾಡಲಾಗಿದೆ. ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ಹಿರಿಯ ನಾಯಕರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ಈಗ ಅನಗತ್ಯವಾದ ಗೊಂದಲ ಬೇಡಾ ಎಂದರು.