ಗಿರಣಿಚಾಳದಲ್ಲಿ ಅಗ್ನಿ ಅವಘಡ

ಬೆಂಕಿ
Advertisement

ಹುಬ್ಬಳ್ಳಿ: ಕಾರವಾರ ರಸ್ತೆಯಲ್ಲಿರುವ ಗಿರಣಿಚಾಳ ಆವರಣದಲ್ಲಿ ಸೋಮವಾರ ರಾತ್ರಿ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಗಿರಣಿಚಾಳ ಆವರಣದಲ್ಲಿರುವ ಕಟ್ಟಿಗೆಗೆ ಬೆಂಕಿ ತಗಲಿದ ಕಾರಣಕ್ಕಾಗಿ ಅಪಾರ ಪ್ರಮಾಣದ ಕಟ್ಟಿಗೆ ಸುಟ್ಟು ಭಸ್ಮವಾಗಿವೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದರು. ಬೆಂಕಿ ಅವಘಡಕ್ಕೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.