ಗಿರೀಶ ಸಾವಂತ್ 8 ದಿನ ಸಿಐಡಿ ಕಸ್ಟಡಿಗೆ

Advertisement

ಹುಬ್ಬಳ್ಳಿ: ಅಂಜಲಿ ಕೊಲೆ ಆರೋಪಿ ಗಿರೀಶ ಸಾವಂತ್ ನನ್ನು 8 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಒಂದನೇ ಹೆಚ್ಚುವರಿ ದಿವಾಣಿ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದೆ.

ಗುರುವಾರ ಮಧ್ಯಾಹ್ನ ಆರೋಪಿ ಗಿರೀಶನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಐಡಿ ಅಧಿಕಾರಿಗಳು 15 ದಿನಗಳ ಕಾಲ ಕಸ್ಟಡಿ ಕೇಳಿದ್ದರು.‌ ಸಿಐಡಿ ಅಧಿಕಾರಿಗಳ ಮನವಿಯನ್ನು ಪರುಶೀಲಿಸಿದ ನ್ಯಾಯಾಧೀಶ ನಾಗೇಶ ನಾಯ್ಕ್ 8 ದಿನಗಳ ಕಸ್ಟಡಿಯ ಆದೇಶ ನೀಡಿದ್ದಾರೆ.