ಗೃಹಲಕ್ಷ್ಮೀ ಅರ್ಜಿ ಸ್ವೀಕರಿಸಿದ ಪೊಲೀಸರು

Advertisement

ಬಾಗಲಕೋಟೆ: ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಯೋಜನೆ ಬುಧವಾರದಿಂದ ಆರಂಭಗೊಂಡಿದ್ದು, ರಬಕವಿ-ಬನಹಟ್ಟಿ-ಹೊಸೂರ-ರಾಮಪೂರಗಳಲ್ಲಿನ ನಿಗದಿತ ಸರ್ಕಾರಿ ಕೇಂದ್ರಗಳಾಗಿ 5 ಕಡೆ ನಿರ್ಮಿಸಿದ್ದು, ಎಲ್ಲೆಡೆ ಮಹಿಳೆಯರ ದಂಡೇ ಸಾಗಿ ಬರುತ್ತಿದೆ.
ಇಂದು ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಗಾಂಧಿ ವೃತ್ತದ ಬಳಿಯಿರುವ ಸರ್ಕಾರಿ ಕೇಂದ್ರದ ಬಳಿ ಸಾವಿರಾರು ಮಹಿಳೆಯರು ಸೇರಿ ಅರ್ಜಿ ಸಲ್ಲಿಸಲು ಹೆಣಗಾಡಿದ ಪ್ರಸಂಗ ನಡೆಯಿತು.
ಫಲಾನುಭವಿಗಳ ಮೊಬೈಲ್‌ಗೆ ಮೆಸೇಜ್ ಬಂದ ನಂತರ ಆಯಾ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಬಹುದೆಂಬ ಸರ್ಕಾರದ ನಿಯಮವಾಗಿದೆ. ಆದರೆ ಇಲ್ಲಿ ಮಾತ್ರ ಇಡೀ ಊರೇ ಕಿತ್ತು ಬಂದ ರೀತಿಯಲ್ಲಿ ಅರ್ಜಿಗಳನ್ನು ಕೈಯಲ್ಲಿ ಹಿಡಿದು ಬರುತ್ತಿರುವದು ಸಾಮಾನ್ಯವಾಗಿತ್ತು.
ಅರ್ಜಿಗಳನ್ನು ಸ್ವೀಕರಿಸಿದ ಪೊಲೀಸರು:
ಇಲ್ಲಿ ಕಿಕ್ಕಿರಿದ ಜನತೆಯನ್ನು ಕಂಡು ಪೊಲೀಸರು ಆಗಮಿಸಿದರೂ ನಿಯಂತ್ರಣಕ್ಕೆ ಬಾರದ ಜನತೆ ಪುಟ್ಟ ಬಾಗಿಲಿನ ಮುಂದೆ ನಿಂತ ಪೊಲೀಸರು ಕೈಯಲ್ಲಿ ಹಿಡಿದುಕೊಂಡ ಬಂದ ಸಾವಿರಾರು ಅರ್ಜಿಗಳನ್ನು ಪಡೆದುಕೊಂಡ ಘಟನೆಯೂ ನಡೆಯಿತು.