ಗೊಂಡ ವ್ಯಕ್ತಿಯ ಕೊಲೆ: ಸಮಾಜ ಬಾಂಧವರಿಂದ ಅಹೋರಾತ್ರಿ ಧರಣಿ

Advertisement

ಚಿಟಗುಪ್ಪ (ಬೀದರ್ ಜಿಲ್ಲೆ) : ತಾಲ್ಲೂಕಿನ ನಿರ್ಣವಾಡಿ ಗ್ರಾಮದಲ್ಲಿ ಗೊಂಡ ವ್ಯಕ್ತಿಯ ಕೊಲೆ ಖಂಡಿಸಿ ಮನ್ನಾಎಖೇಳಿ ಗ್ರಾಮದಲ್ಲಿ ಗೊಂಡ ಸಮಾಜ ಬಾಂಧವರಿಂದ ಅಹೋರಾತ್ರಿ ಧರಣಿ ಮುಂದುವರೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಎಲ್ಲಾ ಆರೋಪಿಗಳನ್ನು ಈ ಕೂಡಲೇ ಬಂಧಿಸುವಂತೆ ಪ್ರತಿಭಟಿಸುತ್ತಿರುವ ಪ್ರತಿಭಟನಾಕಾರರು ಪೊಲೀಸ್ ತಾರತಮ್ಯ ನೀತಿ ಖಂಡಿಸಿ ಪೊಲೀಸರ ವಿರುದ್ಧ ಘೋಷಣೆ ಕೂಗಿದ್ದಾರೆ. ಕೊಲೆ ನಡೆದ ನಿರ್ಣವಾಡಿ ಗ್ರಾಮದಲ್ಲಿಯೂ ಕೂಡ ಬಿಗುವಿನ ವಾತಾವರಣವಿದ್ದು ಗ್ರಾಮದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.