ಗೋ ಪೂಜೆಯೊಂದಿಗೆ ರಾಜಕೀಯ ಚಟುವಟಿಕೆಗೆ ಚಾಲನೆ

Advertisement

ಬಳ್ಳಾರಿ:ಮಾಜಿ ಸಚಿವ ಜನಾರ್ಧನ ರೆಡ್ಡಿ ಪತ್ನಿ ಅರುಣ ಲಕ್ಷ್ಮಿ ತಮ್ಮ ನಿವಾಸದ ಮುಂದೆ ಗೋವಿಗೆ ಪೂಜೆ ಸಲ್ಲಿಸಿ, ಪ್ರಸಾದ ಅರ್ಪಿಸಿ ರಾಜಕೀಯ ಆರಂಭಿಸಿದ್ದಾರೆ.
ಅವ್ವಂಭಾವಿಯ ತಮ್ಮ ನಿವಾಸದ ಮುಂದೆ ಗೋವಿಗೆ ಪೂಜೆ ಸಲ್ಲಿಸಿ, ಬಾಳೆಹಣ್ಣು, ಬೆಲ್ಲ, ಅಕ್ಕಿ ಪ್ರಸಾದ ಅರ್ಪಿಸಿದರು. ಈ ವೇಳೆ ಮುಸ್ಲಿಂ ಯುವತಿಯರು ಗುಲಾಬಿ ಹೂ ನೀಡಿ, ಶಾಲು ಹೊದಿಸಿ ಸನ್ಮಾನ ಮಾಡಿ ಶುಭ ಹಾರೈಸಿದರು.
ತದನಂತರ ತಾಲೂಕಿನ ಬೆಣಕಲ್ಲು ಗ್ರಾಮಕ್ಕೆ ತೆರಳಿ ಪಕ್ಷದ ಕಾರ್ಯಕರ್ತರ ಮನೆಯಲ್ಲಿ ಉಡಿ ತುಂಬಿಸಿಕೊಂಡರು.