ಗ್ರಹಣ ಕಾಲದಲ್ಲೂ ದರ್ಶನ

ದೇವಸೂಗುರು
Advertisement

ಕೇತುಗ್ರಸ್ತ ಖಂಡಗ್ರಾಸ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ದೇವಸ್ಥಾನಗಳು ಮಂಗಳವಾರ ಬಾಗಿಲು ಮುಚ್ಚಿವೆ. ಆದರೆ ರಾಯಚೂರು ಜಿಲ್ಲೆಯ ದೇವಸೂಗುರು ಸೂಗುರೇಶ್ವರ ದೇವಸ್ಥಾನ ಹಾಗೂ ಚಿತ್ರದುರ್ಗದ ನೀಲಕಂಠೇಶ್ವರ ದೇಗಲುಗಳು ಮಾತ್ರ ಇದಕ್ಕೆ ಹೊರತಾಗಿವೆ. ಗ್ರಹಣ ಕಾಲದಲ್ಲೂ ತೆರೆದಿರುವುದು ಈ ದೇವಾಲಯಗಳ ವಿಶೇಷ.