ಚಾಮರಾಜಪೇಟೆ ಮೈದಾನ ಯಾರಿಗೂ ಸೇರಿದ ಆಸ್ತಿಯಲ್ಲ : ಆರ್​ ಅಶೋಕ್​…

Advertisement

ಬೆಂಗಳೂರು : ಚಾಮರಾಜಪೇಟೆ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು, ಇದು ಯಾರಿಗೂ ಸೇರಿದ ಆಸ್ತಿಯಲ್ಲ . ಏನ್​ ಮಾಡಬೇಕು ಎಂದು ಇಲಾಖೆ ನಿರ್ಧಾರ ಮಾಡುತ್ತೆ ಎಂದು ಕಂದಾಯ ಸಚಿವ ಆರ್​ ಅಶೋಕ್​ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಆರ್​ ಅಶೋಕ್​ ಮಾತನಾಡಿ 75ನೇ ಸ್ವಾತಂತ್ರ್ಯೋತ್ಸವವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಯಾರೂ ವಿರೋಧ ಮಾಡಿಲ್ಲ, ಗೊಂದಲ ಸೃಷ್ಟಿಸಿಲ್ಲ. ಗಣೇಶೋತ್ಸವವನ್ನೂ ಅತ್ಯಂತ ಯಶಸ್ವಿಯಾಗಿ ಮಾಡಿ ತೋರಿಸುವೆ ಎಂದಿದ್ಧಾರೆ. ಸುಪ್ರೀಂಕೋರ್ಟ್​ನಲ್ಲಿ ನಮ್ಮವರೂ ಸಮರ್ಥ ವಾದ ಮಾಡುತ್ತಾರೆ. ಅಡ್ವೊಕೇಟ್ ಜನರಲ್​​​​​​ ಇದ್ದಾರೆ, ಸಾಲಿಸಿಟರ್​​ ಜನರಲ್​​ ಕೂಡಾ ಇದ್ದಾರೆ. ಜಾಗ ಕಂದಾಯ ಇಲಾಖೆಗೆ ಸೇರಿದ್ದು ಅನ್ನೋ ದಾಖಲೆಗಳಿವೆ. ಐದು ಅರ್ಜಿಗಳು ಬಂದಿದ್ದವು, ಮೂರು ಅರ್ಜಿ ರದ್ದು ಮಾಡಿದ್ದೇವೆ. ಇನ್ನೂ 10 ಗಂಟೆಗಳ ಅವಕಾಶವಿದೆ , ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ಧಾರೆ.