ಚಿಗರಿಗೆ ಚಿಗರಿ ಡಿಕ್ಕಿ: ತಪ್ಪಿದ ಅನಾಹುತ

Advertisement

ಹುಬ್ಬಳ್ಳಿ: ಚಿಗರಿ ಬಸ್ ಮತ್ತೊಂದು ಚಿಗರಿ ಬಸ್‌ಗೆ ಡಿಕ್ಕಿ ಹೊಡೆದ ಘಟನೆ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಗುರುವಾರ ನಡೆದಿದೆ.
ರೈಲ್ವೆ ಸ್ಟೇಷನ್‌ನಿಂದ ಧಾರವಾಡಕ್ಕೆ ಹೊರಟಿದ್ದ ಚಿಗರಿ ಬಸ್‌ಗೆ, ಅದೇ ಮಾರ್ಗವಾಗಿ ಸಾಗುತ್ತಿದ್ದ ಮತ್ತೊಂದು ಚಿಗರಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಮುಂದಿನ ಬಸ್‌ನ ಹಿಂಬದಿಯ ಮತ್ತು ಹಿಂದಿನ ಬಸ್‌ನ ಮುಂದಿನ ಗಾಜು ಸಂಪೂರ್ಣ ಪುಡಿಪುಡಿ ಆಗಿದೆ.
ಹಿಂದೆ ಬರುತ್ತಿದ್ದ ಚಿಗರಿ ಬಸ್ ಬ್ರೇಕ್ ಫೇಲ್ ಆದ ಕಾರಣ ಅವಘಢ ಸಂಭವಿಸಿದೆ. ಅದೃಷ್ಟವಶಾತ್ ಬಸ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಒಂದು ವೇಳೆ ಮುಂದೆ ಚಿಗರಿ ಬಸ್ ಇಲ್ಲದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು ಎನ್ನಲಾಗಿದೆ.