ಡಿಸಿಸಿ ಬ್ಯಾಂಕ್ ನಿರ್ದೇಶಕ ನಂದಕುಮಾರ ಪಾಟೀಲ ನಿಧನ

Advertisement

ಬಾಗಲಕೋಟೆ: ಡಿಸಿಸಿ ಬ್ಯಾಂಕ್ ನಿರ್ದೇಶಕ, ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕ ಅಧ್ಯಕ್ಷ ಮುಧೋಳದ ನಂದಕುಮಾರ ಪಾಟೀಲ(ನಂದಗೌಡರು) ರವಿವಾರ ತಡರಾತ್ರಿ ನಿಧನ‌ ಹೊಂದಿದರು.

ಮುಧೋಳ ತಾಲೂಕಿನ ಸೋರಗಾಂವ್ ಗ್ರಾಮದವರಾದ ನಂದುಗೌಡರು ಮಾಜಿ ಸಚಿವ ಎಸ್.ಆರ್.ಪಾಟೀಲ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಸೋಮವಾರ ಅವರ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.