ಚೆನ್ನೈ: ತಮಿಳುನಾಡಿನಲ್ಲಿ ಸಂಭವಿಸಬಹುದಾದ ಭೀಕರ ರೈಲು ದುರಂತ ಲೋಕೋ ಪೈಲಟ್ಗಳ ಸಮಯ ಪ್ರಜ್ಞೆಯಿಂದ ತಪ್ಪಿದೆ.
ತಮಿಳುನಾಡಿನ ತಿರುಚ್ಚಿ ಬಳಿ ರೈಲ್ವೆ ಹಳಿ ಮೇಲೆ ರೈಲು ಅಪಘಾತವಾಗಲೆಂದು ಲಾರಿ ಟೈರ್ ಇಡಲಾಗಿತ್ತು. ಈ ವೇಳೆ ಕನ್ಯಾಕುಮಾರಿ-ಚೆನ್ನೈ ಎಗ್ಮೋರ್ ಎಕ್ಸ್ಪ್ರೆಸ್ ರೈಲು ಬಂದಿದ್ದು ಟೈರ್ಗೆ ಡಿಕ್ಕಿ ಹೊಡೆದಿದೆ. ಆದರೆ ಲೋಕೋ ಪೈಲಟ್ ರೈಲ್ವೆ ಟ್ರ್ಯಾಕ್ನಲ್ಲಿ ಟೈರ್ಗಳನ್ನು ಇರಿಸಿರುವುದನ್ನು ಗಮನಿಸಿ ರೈಲನ್ನು ಕ್ರಮೇಣ ನಿಧಾನಗೊಳಿಸಿದ್ದಾರೆ. ಹೀಗಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.