ತಹಶೀಲ್ದಾರ್‌ ಶೃತಿ ಅಧಿಕಾರ ಸ್ವೀಕಾರ

Advertisement

ಕುಷ್ಟಗಿ: ಕುಷ್ಟಗಿ ತಹಶೀಲ್ದಾರ್ ಆಗಿ ಮರಳಿ ಶೃತಿ ಮಳ್ಳಪ್ಪಗೌಡ್ರ ಅಧಿಕಾರ ಸ್ವೀಕರಿಸಿದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶೃತಿ ವಿಜಯನಗರಕ್ಕೆ ವರ್ಗಾವಣೆಗೊಂಡಿದ್ದರು. ಅವರ ಸ್ಥಾನಕ್ಕೆ ತಹಶೀಲ್ದಾರ್ ರವಿ ಅಂಗಡಿ ಆಗಮಿಸಿದ್ದರು. ನೀತಿ ಸಂಹಿತಿ ಮುಗಿದ ಹಿನ್ನೆಲೆಯಲ್ಲಿ ಮರಳಿ ಶೃತಿ ಮಳ್ಳಪ್ಪಗೌಡ್ರ ಕುಷ್ಟಗಿ ತಹಶೀಲ್ದಾರ್ ಅಧಿಕಾರ ಸ್ವೀಕರಿಸಿದರು.
ಕಂದಾಯ ಇಲಾಖೆಯ ಸಿಬ್ಬಂದಿ ಶೃತಿ ಮಳ್ಳಪ್ಪಗೌಡ್ರ ಅವರನ್ನು ಬರಮಾಡಿಕೊಂಡರು. ತಹಶೀಲ್ದಾರ್ ರವಿ ಅಂಗಡಿ ದಂಪತಿಯನ್ನು ಸನ್ಮಾನಿಸಿ, ಬೀಳ್ಕೊಟ್ಟರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಎಲ್. ಪೂಜೇರಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಮಹಾಂತೇಶ ಚೌಳಗಿ, ಗ್ರೇಡ್-೨ ತಹಶೀಲ್ದಾರ್ ಮುರಳೀಧರ ಮುಕ್ತಿದಾರ, ಶಿರಸ್ತೇದಾರರಾದ ಶರಣಪ್ಪ ಕಳ್ಳಿಮಠ, ಸತೀಶ ಜಿ, ವಿಜಯಾ ಮುಂಡರಗಿ, ರಾಜೇಶ್ವರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಸ್.ವಿ. ಢಾಣಿ, ಹನುಮನಾಳ ನಾಡಕಚೇರಿ ತಹಶೀಲ್ದಾರ್ ಆಂಜನೇಯ, ಸಿ.ಎಂ. ಹಿರೇಮಠ ಸೇರಿದಂತೆ ಅನೇಕರು ಇದ್ದರು.