ತಾಕತ್ತಿದ್ದರೆ ನನ್ನನ್ನು ಬಂಧಿಸಿ: ಬಿಜೆಪಿಗೆ ಮಮತಾ ಸವಾಲು

ಮಮತಾ ಬ್ಯಾನರ್ಜಿ
Advertisement

ತಾಕತ್ತಿದ್ದರೆ ನನ್ನನ್ನು ಬಂಧಿಸಲಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಬಿಜೆಪಿ ಸರಕಾರಕ್ಕೆ ಸವಾಲು ಹಾಕಿದ್ದಾರೆ.
ಕೋಲ್ಕತ್ತದಲ್ಲಿ ಟಿಎಂಸಿ ವಿದ್ಯಾರ್ಥಿ ಘಟಕದ ರ್‍ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಎಲ್ಲರನ್ನೂ ಕಳ್ಳರೆಂದು ಬಿಜೆಪಿ ಬಿಂಬಿಸುತ್ತಿದೆ. ಟಿಎಂಸಿಯ ನಾವೆಲ್ಲರೂ ಕಳ್ಳರು ಮತ್ತು ಬಿಜೆಪಿಯ ನಾಯಕರು ಮಾತ್ರ ಪವಿತ್ರರು ಎಂಬ ರೀತಿಯಲ್ಲಿ ಪ್ರಚಾರ ನಡೆಯುತ್ತಿದೆ ಎಂದು ಅವರು, ಒಂದು ವೇಳೆ ನಾನು ರಾಜಕೀಯದಲ್ಲಿ ಇರದಿದ್ದರೆ ಅವರ ನಾಲಿಗೆಯನ್ನು ಸೀಳಿ ಹಾಕುತ್ತಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.