ತಾಕತ್‌ ಇದ್ರೆ ನನ್ನ ಎದುರುಗಡೆ ಗೋಮಾಂಸ ತಿನ್ನಿ: ಸಿದ್ದರಾಮಯ್ಯಗೆ ಸಚಿವ ಪ್ರಭು ಚವ್ಹಾಣ್‌ ಸವಾಲು

Prabhu
Advertisement

ಬೆಂಗಳೂರು: ತಾಕತ್ ಇದ್ರೆ ನನ್ನ ಎದುರುಗಡೆ ಗೋಮಾಂಸ ತಿನ್ನಿ, ನಿಮ್ಮನ್ನು ಒಳಗಡೆ ಹಾಕಿಸ್ತೀನಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸವಾಲು ಹಾಕಿದರು.
ವಿಕಾಸಸೌಧದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ ರದ್ದು ಪಡಿಸತ್ತೇವೆ ಅನ್ನೋಕೆ ಸಿದ್ದರಾಮಯ್ಯ ಯಾರು? ಎಂದು ಪ್ರಶ್ನಿಸಿದರಲ್ಲದೆ, ನನ್ನ ಮುಂದೆ ಹಂದಿ ತಿಂತೀನಿ, ಹಸು ಮಾಂಸ ತಿನ್ನುತ್ತೇನೆ ಅಂತೀರಲ್ಲಾ,‌ ತಾಕತ್ ಇದ್ರೆ ನನ್ನ ಎದುರುಗಡೆ ಗೋಮಾಂಸ ತಿನ್ನಿ, ನಿಮ್ಮನ್ನು ಒಳಗಡೆ ಹಾಕಿಸ್ತೀನಿ ಎಂದರು.