ನರಸಿಂಹಸ್ವಾಮಿಯ ದರ್ಶನ ಪಡೆದ ರಿಷಭ್ ಶೆಟ್ಟಿ

Advertisement

ಚಿಕ್ಕಮಗಳೂರು: ಸದ್ಯ ಕಾಂತಾರ ಪಾರ್ಟ್-2 ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟ, ನಿರ್ದೇಶಕ ರಿಷಭ್ ಶೆಟ್ಟಿ ಇದೀಗ ಶೂಟಿಂಗ್ ಗೆ ಕೊಂಚ ಬ್ರೇಕ್ ಹಾಕಿ ದೇಗುಲ ಯಾತ್ರೆ ಕೈಗೊಂಡಿದ್ದಾರೆ.

ರಿಷಭ್ ಪತ್ನಿ, ತಾಯಿ ಹಾಗೂ ಮಕ್ಕಳ ಸಮೇತ ಕೊಪ್ಪ ತಾಲೂಕಿನ ಹರಿಹರಪುರ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ

ಈ ವೇಳೆ ರಿಷಭ್ ಶೆಟ್ಟಿ ದಂಪತಿ ಶಾರದಾ ಲಕ್ಷ್ಮಿ ನರಸಿಂಹಸ್ವಾಮಿಯ ದರ್ಶನ ಪಡೆದಿದ್ದಾರೆ. ಅಲ್ಲದೇ ಹರಿಹರಪುರದ ಶ್ರೀ ಸ್ವಯಂ ಸಚ್ಚಿದಾನಂದ ಶ್ರೀಗಳ ದರ್ಶನವನ್ನೂ ಪಡೆದಿದ್ದಾರೆ.

ತುಂಗಾ ನದಿ ತಟದಲ್ಲಿರುವ ಈ ದೇಗುಲ ಭಾರೀ ಐತಿಹ್ಯವನ್ನು ಹೊಂದಿದೆ.