ನಾಮಪತ್ರ ತಿರಸ್ಕೃತ: ವೈರಲ್ ಮಾಹಿತಿಗೆ ಡಿಸಿ ಸ್ಪಷ್ಟನೆ

Advertisement

ಹುಬ್ಬಳ್ಳಿ: ನಾಮಪತ್ರ ಪರಿಶೀಲನೆ ದಿನವಾದ ಶುಕ್ರವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಅವರ ನಾಮಪತ್ರ ಸೇರಿದಂತೆ ಕೆಲವರ ನಾಮಪತ್ರ ತಿರಸ್ಕೃತವಾಗಿವೆ ಎಂಬ ಮಾಹಿತಿ ಹರಿದಾಡಿತು. ಮತ್ತೊಂದೆಡೆ ಅವರ ನಾಮಪತ್ರ ಪುರಸ್ಕೃತವಾಗಿದೆ ಎಂಬ ಮಾಹಿತಿಯೂ ಹರಿದಾಡಿತು. ಇದರಿಂದ ಸಾಕಷ್ಟು ಗೊಂದಲ ಸೃಷಿಯಾಗಿದ್ದಂತೂ ನಿಜ.
ಆದರೆ, ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರನ್ನು ಸಂಪರ್ಕಿಸಿದಾಗ ಜಾಲತಾಣದಲ್ಲಿ ಹರಿದಾಡಿದೆ ಎನ್ನಲಾದ ಮಾಹಿತಿ ಸುಳ್ಳು. ನಾವಿಂದು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಾಮಪತ್ರ ಪರಿಶೀಲನಾ ಕಾರ್ಯ ಪೂರ್ಣಗೊಳಿಸಿದ್ದೇವೆ. ನಾಮಪತ್ರಗಳ ಕ್ರೋಢೀಕರಣ ಪ್ರಕ್ರಿಯೆ ನಡೆದಿದೆ. ಯಾವುದೇ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾದ ಮಾಹಿತಿ ಮಾಧ್ಯಮಕ್ಕೆ ನೀಡಿಲ್ಲ. ಕೇವಲ ಅಂಕಿಸಂಖ್ಯೆ ಮಾತ್ರ ನೀಡಿದ್ದೇವೆ ಎಂದು ಸ್ಪಷ್ಪಪಡಿಸಿದರು.