ನಾವಿಕನಿಲ್ಲದ ದೋಣಿಯಂತಿರುವ ಬಿಜೆಪಿ

ಪ್ರಿಯಾಂಕ ಖರ್ಗೆ
Advertisement

ಬೆಂಗಳೂರು: ನಾವಿಕನಿಲ್ಲದ ದೋಣಿಯಂತಿರುವ ಬಿಜೆಪಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿರುವ ಅವರು ಜನವಿರೋಧಿ ರಾಜಕಾರಣ ಬಿಜೆಪಿಯನ್ನು ಈಗಾಗಲೇ 63 ಮತ್ತೊಂದಕ್ಕೆ ತಂದು ನಿಲ್ಲಿಸಿದೆ. ಆದರೂ ಇವರು ಪಾಠ ಕಲಿತಿಲ್ಲಾ. ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಿಕೊಳ್ಳಗಾಗದವರು ಇಂದು ಸದನದ ನಿಯಮಾವಳಿ ಗಾಳಿಗೆ ತೂರಿ ‘ಮೊಂಡಾಟ’ ನಡೆಸಿದ್ದು ಅಕ್ಷಮ್ಯ ಅಪರಾಧ. ಇದೇ ಬಿಜೆಪಿ, ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಾಗ ಒಂದು ತಿಂಗಳ ಕಾಲ ಸಂಪುಟವನ್ನೇ ರಚಿಸಿರಲಿಲ್ಲ. ಆದರೆ ನಾವು ಸಂಪೂರ್ಣ ಸರ್ಕಾರದೊಂದಿಗೆ ಜನರಿಗೆ ನೀಡಿದ್ದ ವಾಗ್ದಾನ ಈಡೇರಿಸುತ್ತಿದ್ದೇವೆ. ನಾವಿಕನಿಲ್ಲದ ದೋಣಿಯಂತಿರುವ ಬಿಜೆಪಿ ಪಕ್ಷದವರ ಅನುಚಿತ ವರ್ತನೆ ಯಾವುದೇ ರೀತಿಯಲ್ಲೂ ಸದನ ಯೋಗ್ಯವಲ್ಲಾ. ರಾಜ್ಯದ ಜನತೆ ಹುಷಾರಾಗಿದ್ದು, ಈ ನಾಟಕಗಳಿಗೆ ಬಲಿಪಶುವಾಗುವುದಿಲ್ಲ ಎನ್ನುವುದು ಬಿಜೆಪಿ ನಾಯಕರಿಗೆ ಬೇಗ ಅರ್ಥವಾಗುವಂತಾಗಲಿ ಎಂದಿದ್ದಾರೆ.