ನಾವು ಯಾರನ್ನೂ ನಿಷೇಧಿಸಿಲ್ಲ

Advertisement

ಹೈದರಾಬಾದ್​: ನಾವು ಯಾರನ್ನೂ ನಿಷೇಧಿಸಿಲ್ಲ, ಬಹಿಷ್ಕರಿಸಿಲ್ಲ ಅಥವಾ ಕಪ್ಪು ಪಟ್ಟಿಗೆ ಸೇರಿಸಿಲ್ಲ ಎಂದು ಕಾಂಗ್ರೆಸ್ ​ನಾಯಕ ಪವನ್​ ಖೇರಾ ಹೇಳಿದ್ದಾರೆ.

ಹೈದರಾಬಾದ್​ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿಯಾ ಒಕ್ಕೂಟವು ಹಲವು ಸುದ್ದಿ ಮಾಧ್ಯಮದ ನಿರೂಪಕರನ್ನು ಬಹಿಷ್ಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ನಾವು ಯಾರನ್ನೂ ನಿಷೇಧಿಸಿಲ್ಲ. ನಾವು ಸಮಾಜದಲ್ಲಿ ದ್ವೇಷವನ್ನು ಹರಡುವವರಿಗೆ ಸಹಕರಿಸುವುದಿಲ್ಲ. ಆದರೆ, ಅವರು ನಮ್ಮ ಶತ್ರುಗಳಲ್ಲ, ನಾವು ಅವರನ್ನು ದ್ವೇಷ ಮಾಡುವುದಿಲ್ಲ. ನಾಳೆ ಅವರು ಮಾಡುತ್ತಿರುವುದು ಭಾರತದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಅವರು ಅರಿತುಕೊಂಡರೆ, ನಾವು ಮತ್ತೆ ಅವರ ಕಾರ್ಯಕ್ರಮಗಳಿಗೆ ಹಾಜರಾಗುತ್ತೇವೆ. ಇದನ್ನು ಬ್ಯಾನ್​ ಎಂದು ಕರೆಯಬೇಡಿ ಎಂದರು.