ನಿನ್ನೊಬ್ಬಳದೇ ಸಮಸ್ಯೆ ಅಲ್ಲ ನಡಿಯಮ್ಮ ,ಬಡ ಮಹಿಳೆಗೆ ಸೋಮಶೇಖರ್​, ಜಿಟಿಡಿ ಬೈಗುಳ

Advertisement

ಮೈಸೂರು: ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಸಚಿವ ಎಸ್​.ಟಿ ಸೋಮಶೇಖರ್​ ಹಾಗೂ ಶಾಸಕ ಜಿ.ಟಿ ದೇವೇಗೌಡ ತಾತ್ಸಾರದ ಉತ್ತರ ನೀಡಿರುವ ಘಟನೆ ನಡೆದಿದೆ.

ಮೈಸೂರಿನಲ್ಲಿ ನಿರಂತರ ಮಳೆಯಿಂದಾಗಿ ಜನ ಹೈರಾಣಾಗಿ ಹೋಗಿದ್ದು, ಮಹಿಳೆಯೊಬ್ಬರು ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ ಸೋಮಶೇಖರ್​ ಅವರ ಕಾರು ನಿಲ್ಲಿಸಿ ಸಮಸ್ಯೆ ಹೇಳಿಕೊಳ್ಳಲು ಮುಂದಾಗಿದ್ದಾರೆ.

ವೇಳೆ ಸಚಿವರು ಜಿಲ್ಲಾಧಿಕಾರಿ ಇದ್ದಾರೆ ಹೋಗಮ್ಮ, ಅಲ್ಲಿ ಹೋಗು ಎಂದು ತಾತ್ಸಾರದ ಉತ್ತರ ನೀಡಿ ಶಾಸಕ ಜಿ.ಟಿ ದೇವೇಗೌಡ ಅವರ ಬಳಿಗೆ ಕಳುಹಿಸಿದ್ದಾರೆ.

ಬಳಿಕ ಜಿ.ಟಿ ದೇವೇಗೌಡರ ಬಳಿ ಬಂದ ಮಹಿಳೆ ಸರ್​, ನಮ್ಮ ಮನೆಗೆ ನೀರು ನುಗ್ಗಿ ಸಮಸ್ಯೆ ಆಗಿದೆ. ನೀವು ಬಂದು ನೋಡಿ, ನಾವು ಜೀವನ ಮಾಡುವುದು ಹೆಂಗೆ, ನಾವು ಇರಬೇಕಾ ಬೇಡವಾ..? ಹೀಗೆ ಆದರೆ ನಾವು ಸಾಯಬೇಕಾಗುತ್ತದೆ ಎಂದು ಕಣ್ಣೀರಿಟ್ಟಿದ್ದಾರೆ. ಈ ವೇಳೆ ಜಿ.ಟಿ ದೇವೇಗೌಡ ಅವರು ಕೂಡ ಉಡಾಫೆ ಉತ್ತರ ನೀಡಿದ್ದು, ಹೋಗಮ್ಮ ಇದು ನಿನ್ನದೊಬ್ಬಳ ಸಮಸ್ಯೆ ಅಲ್ಲ. ಎಲ್ಲಾ ಕಡೆನೂ ಇದೇ ಸಮಸ್ಯೆ ಹೋಗು ಎಂದು ಕಳುಹಿಸಿದ್ದಾರೆ ಎನ್ನಲಾಗಿದೆ. ಜನಪ್ರತಿನಿಧಿಗಳು ತಮ್ಮ ಸಮಸ್ಯೆ ಸ್ಪಂದಿಸದ ಕಾರಣ ಮಹಿಳೆ ಕಣ್ಣೀರಿಡುತ್ತಲೇ ವಾಪಸ್​ ಆಗಿದ್ದಾರೆ.