ನೇತಾಜಿ ಸುಭಾಷ್ ಚಂದ್ರ ಬೋಸ್​ ಪ್ರತಿಮೆ ಅನಾವರಣ..!

Advertisement

ನವದೆಹಲಿ: ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ಹೊಸದಾಗಿ ನಾಮಕರಣಗೊಂಡ ಕರ್ತವ್ಯ ಪಥವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.ಇದುವರೆಗೂ ರಾಜಪಥ ಎಂದು ಕರೆಸಿಕೊಳ್ಳುತ್ತಿದ್ದ ಈ ಸ್ಥಳ ಇನ್ನುಮುಂದೆ ಕರ್ತವ್ಯ ಪಥ ಎಂದು ಕರೆಸಿಕೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಈ ಸ್ಥಳದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಪುತ್ಥಳಿಯನ್ನು ಅನಾವರಣಗೊಳಿಸಿ, ಗೌರವ ಸಲ್ಲಿಸಿದ್ರು. ಈ ಪ್ರತಿಮೆಯನ್ನು 28 ಅಡಿ ಎತ್ತರದ, ಏಕಶಿಲೆಯ ಗ್ರಾನೈಟ್ ಕಲ್ಲಿನಿಂದ ಕೆತ್ತಲಾಗಿದೆ. ಇದು ಸುಮಾರು 65 ಮೆಟ್ರಿಕ್ ಟನ್ ತೂಕವಿದೆ.