ಪಂಚರತ್ನ ರಥಯಾತ್ರೆ ಪುನಾರಂಭ

ಪಂಚರತ್ನ
Advertisement

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರದಿಂದ ಪಂಚರತ್ನ ರಥಯಾತ್ರೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಮರು ಆರಂಭ ಮಾಡಿದರು.
ಮಹಾ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ರಥಯಾತ್ರೆಗೆ ಬಿಡುವು ನೀಡಲಾಗಿದ್ದು, ಇಂದು ಆರಂಭವಾದ ರಥಯಾತ್ರೆ 9 ಕ್ಷೇತ್ರಗಳಲ್ಲಿ ಸಂಚರಿಸಲಿದೆ. 22ರಂದು ಶಿವಮೊಗ್ಗ ಗ್ರಾಮಾಂತರ, 23ರಂದು ಸೊರಬ, 24ರಂದು ಯಲ್ಲಾಪುರ, ತೀರ್ಥಹಳ್ಳಿ, 25ರಂದು ಕೊಪ್ಪ, 26ರಂದು ಶೃಂಗೇರಿ, 28ರಂದು ಚಿಕ್ಕಮಗಳೂರು ಮತ್ತು ಮಾರ್ಚ್ 1ರಂದು ಮೂಡಿಗೆರೆಯಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ.