ಪರಿಷತ್ ಸದಸ್ಯ ಸ್ಥಾನಕ್ಕೆ ಕೆ.ಪಿ.‌ನಂಜುಂಡಿ ರಾಜಿನಾಮೆ

Advertisement


ಹುಬ್ಬಳ್ಳಿ:ವಿಧಾನ ಪರಿಷತ್ ಸದಸ್ಯ, ಬಿಜೆಪಿ ಮುಖಂಡ ಕೆ.ಪಿ.‌ನಂಜುಡಿ ತಮ್ಮ ಪರಿಷತ್ ಸದಸ್ಯ ಸ್ಥಾನಕ್ಕೆ ಮಂಗಳವಾರ ರಾಜಿನಾಮೆ ಸಲ್ಲಿಸಿದರು‌.
ಇಲ್ಲಿನ‌ ದೇಸಾಯಿ‌ ಸರ್ಕಲ್‌ ಹತ್ತಿರದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಗೃಹ ಕಚೇರಿಗೆ ಬೆಳಗ್ಗೆ ಆಗಮಿಸಿದ ಕೆ. ಪಿ.ನಂಜುಂಡ್ಡಿ ಅವರು ರಾಜಿನಾಮೆ ಸಲ್ಲಿಸಿದರು‌.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆ.ಪಿ. ನಂಜುಂಡ್ಡಿ ಅವರು ವಿಶ್ವಕರ್ಮ ಸಮಾಜದ ರಾಜ್ಯ ನಾಯಕರಾಗಿದ್ದಾರೆ.
ಸಭಾಪತಿ ಬಸವರಾಜ ಹೊರಟ್ಟಿ ಅವರು ಅವರ ರಾಜಿನಾಮೆಯನ್ನು ಅಂಗಿಕರಿಸಿದರು.