ಪ್ರತಿಷ್ಠಿತ ಐಪಿಎಲ್‌ಗೆ ಆಯ್ಕೆಯಾದ ಸಿಂಧನೂರಿನ ಮನೋಜ ಭಾಂಡಗೆ

RCB
Advertisement

ಸಿಂಧನೂರು: ಭಾರತೀಯ ಕ್ರಿಕೆಟ್ ನ ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಸಿಂಧನೂರಿನ ಉದಯ್ಮೋಖ ಕ್ರಿಕೆಟಿಗ ಮನೋಜ್ ಭಾಂಡಗೆ ಆಯ್ಕೆಯಾಗಿದ್ದಾರೆ.ಇಂದು ಕೇರಳದ‌ ಕೊಚ್ಚಿಯಲ್ಲಿ ನಡೆದ ಐಪಿಎಲ್ ನ ಬಿಡ್ ನಲ್ಲಿ ಮನೋಜ್ ಭಾಂಡಗೆ ಮುಖ ಬೆಲೆ 20 ಲಕ್ಷ ರೂ.ಗಳಿಗೆ ಆರ್ ಸಿ ಬಿ ಪಾಲಾಗಿದ್ದಾರೆ.
ಮನೋಜ್ ಭಾಂಡಗೆ ಈಗಾಗಲೇ ಕೆ ಪಿ ಎಲ್, ಮಹಾರಾಜ ಟ್ರೋಫಿ, ಮುಸ್ತಕ್ ಅಲಿ ಟ್ರೋಫಿ, ಅಲ್ಲದೇ 16 ಮತ್ತು 19 ವರ್ಷದೊಳಗಿನ ರಾಜ್ಯ ತಂಡ ಪ್ರತಿನಿಧಿಸಿದ್ದರು. ಸಿಂಧನೂರಿನ ರುದ್ರಗೌಡ ಕ್ರಿಕೆಟ್ ಅಸೋಸಿಯೇಷನ್ ಮೂಲಕ ರಾಯಚೂರು ಝೋನ್ ಪರವಾಗಿ ಆಡುವ ಮೂಲಕ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಸಂಭ್ರಮಾಚರಣೆ: ಸಿಂಧನೂರಿನ ಹೆಮ್ಮೆಯ ಕ್ರಿಕೆಟಿಗ ಮನೋಜ್ ಭಾಂಡಗೆ ಐ ಪಿ ಎಲ್ ಆಯ್ಕೆಯಾದ ಹಿನ್ನಲೆಯಲ್ಲಿ ಚೈತ್ರಾ ಸಿ ಸಿ ಗೆಳೆಯರು ಬಳಗದಿಂದ ನಗರದ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಮುಂದಿನ ದಿನಗಳಲ್ಲಿ ಐಪಿಎಲ್ ನಲ್ಲಿ ಪ್ರದರ್ಶನ ನೀಡುವ ಮೂಲಕ ಭಾರತ ತಂಡದಲ್ಲಿ ಸ್ಥಾನ‌ ಪಡೆಯಲಿ ಎಂದು ಕ್ರಿಕೆಟ್ ಪಟುಗಳಾದ ರಾಜಶೇಖರ ಪಾಟೀಲ್, ಚಂದ್ರಶೇಖರ ಮೈಲಾರ, ಪ್ರಭುರಾಜ ಕರ್ಪೂರಮಠ, ನಾಗರಾಜ ಗಸ್ತಿ, ರವಿಕುಮಾರ ಉಪ್ಪಾರ ಸೇರಿದಂತೆ ಅನೇಕರು‌ ಆಶಿಸಿದ್ದಾರೆ.