ಪ್ರಮೋದ್​​ ಮುತಾಲಿಕ್‌ಗೆ ಜೀವ ಬೆದರಿಕೆ: ದೂರು

P muthalik
Advertisement

ಧಾರವಾಡ: ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಕರೆ ಬಂದಿದೆ. ಅಲ್ಲದೇ ವಾಟ್ಸ್​ಆ್ಯಪ್​​​ನಲ್ಲಿ ಅವಾಚ್ಯ ಶಬ್ದಗಳಿಂದ ಅಪರಿಚಿತ ವ್ಯಕ್ತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್​​ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಿನ್ನ ಪಾಡಿಗೆ ನೀನಿರು, ನಮ್ಮ ತಂಟೆಗೆ ಬರಬೇಡ ಎಂದು ಮುತಾಲಿಕ್ ಅವರಿಗೆ ವ್ಯಕ್ತಿಯೋರ್ವ ಬೆದರಿಕೆ ಹಾಕಿದ್ದಾನೆ. ಈ ಹಿಂದೆ ಮಸಿ ಬಳಸಿಕೊಂಡಿರುವೆ, ಇನ್ನು ಮುಂದಾದರೂ ನಮ್ಮ ಸಮುದಾಯದ ಬಗ್ಗೆ ಮಾತನಾಡಬೇಡ. ನಮ್ಮ ಸಮುದಾಯದ ವಿರುದ್ಧ ಮಾತನಾಡೋಕೆ ನೀನ್ಯಾರು ಎಂದು ಪ್ರಶ್ನಿಸಿದ್ದಾನಂತೆ. ವಾಯ್ಸ್ ಮೇಸೆಜ್‌ನಲ್ಲಿ ಅಶ್ಲೀಲ ಪದಗಳನ್ನು ಬಳಕೆ ಮಾಡಿ ನಿಂದನೆ ಮಾಡಿದ್ದಾನೆ ಎಂದು ಮುತಾಲಿಕ್​ ಆರೋಪಿಸಿದ್ದಾರೆ.