ಬಿಜೆಪಿಗೆ ಜೈ ಎಂದ ಲಖನ್

ಲಖನ್‌ ಜಾರಕಿಹೊಳಿ
Advertisement

ಬೆಳಗಾವಿ: ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಾನು ಬೆಳಗಾವಿ ಗ್ರಾಮೀಣ, ಅಥಣಿ ಕ್ಷೇತ್ರವಷ್ಟೇ ಅಲ್ಲ ಎಲ್ಲೆಡೆಗೂ ಹೋಗುವುದಾಗಿ ವಿಧಾನ ಪರಿಷತ್ ಪಕ್ಷೇತರ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.
ಗೋಕಾಕದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತದೆ, ಅಷ್ಟೇ ಅಲ್ಲ ರಾಜ್ಯದಲ್ಲಿ ಅಧಿಕಾರಕ್ಕೂ ಬರುತ್ತದೆ ಎಂದರು.
ಕಳೆದ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರು, ಅದಕ್ಕೆ ಕಳೆದ ದಿನ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಯಾರು ಹೋಗಿದ್ದರು ಎನ್ನುವುದರ ಮೇಲೆ ಸ್ಪಷ್ಟವಾಗುತ್ತದೆ. ಮೊದಲಿನಿಂದಲೂ ಸವದಿ ಅವರು ಕಾಂಗ್ರೆಸ್ ಕಡೆಗೆ ವಾಲುತ್ತಿದ್ದರು. ಹೆಸರಿಗಷ್ಟೇ ಬಿಜೆಪಿಯಲ್ಲಿದ್ದರು ಎಂದು ಸ್ಪಷ್ಟಪಡಿಸಿದರು. ನಾನು ಬಿಜೆಪಿ ಸೇರಿಲ್ಲ. ಆದರೆ ಅದಕ್ಕೆ ಯಾವಾಗಲೂ ಬಾಹ್ಯ ಬೆಂಬಲ ಇರುತ್ತದೆ ಎಂದು ಲಖನ್ ಜಾರಕಿಹೊಳಿ ಹೇಳಿದರು.